‘ಸೋಲಾಪುರ, ಅಕ್ಕಲಕೋಟೆ, ಆಳಂದ, ಕಲಬುರಗಿ ಮಾರ್ಗವಾಗಿ ರಾಯಚೂರು ನಗರಕ್ಕೆ ಬಂದಿದ್ದೇವೆ. ಮಂತ್ರಾಲಯ, ಕರ್ನೂಲ್ ಮಾರ್ಗವಾಗಿ ಶ್ರೀಶೈಲ ತಲುಪಲಿದ್ದೇವೆ. ಮಾರ್ಗ ಮಧ್ಯೆದಲ್ಲಿ ಭಕ್ತರು ಊಟದ ವ್ಯವಸ್ಥೆ ಮಾಡುತ್ತಾರೆ. ಮಾಡದಿದ್ದರೂ ನಮ್ಮೊಂದಿಗೆ ಇರುವ ವಾಹನದಲ್ಲಿ ಅಡುಗೆ ಸಾಮಗ್ರಿ ಇದೆ. ರಾತ್ರಿ ಹಾಗೂ ಮಧ್ಯಾಹ್ನ ವಾಸ್ತವ್ಯ ಹೂಡುವ ಸ್ಥಳದಲ್ಲೇ ಅಡುಗೆ ಮಾಡಿ ಸೇವಿಸಿ ಪ್ರಯಾಣ ಮುಂದುವರಿಯುತ್ತೇವೆ’ ಎಂದು ಹೇಳಿದರು.