‘ಪ್ರಜಾವಾಣಿ’ ಜೊತೆ ಮಾತನಾಡಿದ ಕಾವೇರಿ, ‘ಇಷ್ಟೊಂದು ಅಂಕ ಬರಲಿದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಕಾಲೇಜಿನಲ್ಲಿ ಉಪನ್ಯಾಸಕರ ಬೋಧನೆ ಸರಿಯಾಗಿ ಆಲಿಸಿ, ಪರಿಶ್ರಮ ಪಟ್ಟು ಓದಿರುವೆ. ನನ್ನ ಪರಿಶ್ರಮ ವ್ಯರ್ಥ ಆಗಿಲ್ಲ. ಯಪಿಎಸ್ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾಗುವ ಗುರಿ ಇಟ್ಟುಕೊಂಡಿರುವೆ’ ಎಂದು ಹೇಳಿದರು.