‘ಈ ಬಗ್ಗೆ ನನಗೆ ಯಾವುದೇ ಸುಳಿವು ಇರಲಿಲ್ಲ. ನನ್ನ ಹತ್ತಿರ ಹಣವೂ ಇಲ್ಲ, ಪ್ರಭಾವವೂ ಇಲ್ಲ. ಆದರೆ, ಪಕ್ಷದಿಂದ ಕೊಡುವ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ಮಾಡುತ್ತಾ ಬರುತ್ತಿದ್ದೇನೆ. ತಾಳ್ಮೆ, ಪರಿಶ್ರಮ ಹಾಗೂ ಜನಸೇವೆ ಮಾಡಬೇಕೆನ್ನುವ ಹಂಬಲ ಇದೆ. ಇದನ್ನು ಪಕ್ಷದ ವರಿಷ್ಠರು ಗುರುತಿಸಿದ್ದಕ್ಕೆ ಸಂತೋಷವಾಗಿದೆ’ ಎಂದು ಅಶೋಕ ಗಸ್ತಿ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.