ಗಂಗಾಸ್ಥಳದಿಂದ ರಥದ ಕಳಸವನ್ನು ಮಹಿಳೆಯರ ಕುಂಭ ಹಾಗೂ ಕಳಸದೊಂದಿಗೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು. ದೇವಸ್ಥಾನದ ಆವರಣದಲ್ಲಿ ಹೋಮ ಹಾಗೂ ಪೂರ್ಣಾಹುತಿ ನಡೆಯಿತು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ದೇವಸ್ಥಾನ ಸಮಿತಿ ಮುಖಂಡ ರಾಮಲಾಲ್ ದೇಶಮುಖ, ಅಶೋಕ ಠಾಕೂರು ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.