‘ಆರ್. ರುದ್ರಯ್ಯ ಅವರನ್ನು ಕ್ಷೇತ್ರಕ್ಕೆ ಬರಮಾಡಿಕೊಂಡು ಖರ್ಗೆ ಮಾನಸ ಪುತ್ರ ಎಂದು ಪ್ರಚಾರ ನೀಡಲಾಗಿತ್ತು. ಟಿಕೆಟ್ ಸಿಗದೇ ಹೋದಾಗ ಪಕ್ಷಾಂತರಗೊಂಡ ರುದ್ರಯ್ಯ ಅವರಿಂದ ದೂರ ಉಳಿದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗಿದ್ದ ಆರ್. ರುದ್ರಯ್ಯ ನಡೆ, ಈಗ ಬಿಜೆಪಿಗೆ ಮುಳುವಾಗುವುದು, ವರವಾಗುವುದೊ ಕಾದೊನೋಡಬೇಕಷ್ಟೆ’ ಎಂದು ಕಾಂಗ್ರೆಸ್ ಮುಖಂಡ ಎಸ್.ಆರ್ ರಸೂಲು ಹೇಳಿದ್ದಾರೆ.