ರಾಜ್ಯ ಹೆದ್ದಾರಿ ಮಧ್ಯೆ ಲಾರಿ ಪಲ್ಟಿಯಾದ ಕಾರಣ ಸುಮಾರು ನಾಲ್ಕು ತಾಸು ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ರಾಯಚೂರಿನಿಂದ ಬರುವ ವಾಹನಗಳನ್ನು ಸಾತ್ ಮೈಲ್ ಹಾಗೂ ನೀರಮಾನ್ವಿಯಿಂದ ಗುಡದಿನ್ನಿ ಮೂಲಕ ತೆರಳಲು ಕ್ರಮ ಕೈಗೊಂಡರು. ಸಿಂಧನೂರು, ಮಾನ್ವಿಯಿಂದ ರಾಯಚೂರಿಗೆ ಹೋಗುವ ವಾಹನಗಳನ್ನು ಕರಡಿಗುಡ್ಡ, ಗುಡದಿನ್ನಿ ಮೂಲಕ ಕಳುಹಿಸಲಾಯಿತು.