’ಕವಿತಾಳದಲ್ಲಿರುವ ಐಓಬಿ ಶಾಖೆಯನ್ನು ಮಾನ್ವಿ ಶಾಖೆಯಲ್ಲಿ ಅಕ್ಟೋಬರ್ 15 ರಿಂದ ವಿಲೀನ ಮಾಡಲಾಗುವುದು ಎಂದು ಗೋವಾದಲ್ಲಿರುವ ಐಓಬಿ ಪ್ರಾದೇಶಿಕ ಕಚೇರಿ ತಿಳಿಸಿದೆ. ಆದರೆ, ಕವಿತಾಳ ಪಟ್ಟಣವು 15 ಸಾವಿರ ಜನಸಂಖ್ಯೆ ಹೊಂದಿದ್ದು, ರಾಷ್ಟ್ರೀಕೃತ ಬ್ಯಾಂಕುಗಳಾದ ಎಸ್ಬಿಐ ಹಾಗೂ ಐಓಬಿ ಎರಡು ಶಾಖೆಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಬ್ಯಾಂಕ್ ಶಾಖೆಯ ಗ್ರಾಹಕರ ನಿಯೋಗವು ಈಗಾಗಲೇ ರಾಯಚೂರು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಐಓಬಿ ಶಾಖೆ ವಿಲೀನ ಮಾಡಿದರೆ ಜನರು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಬ್ಯಾಂಕ್ ಶಾಖೆಯ ಗ್ರಾಹಕರಿಗೆ ಆಗುವ ತೊಂದರೆಯನ್ನು ಎಸ್ಎಲ್ಬಿಸಿಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು’ ಎಂದು ರಾಯಚೂರು ಲೀಡ್ ಬ್ಯಾಂಕ್ ಮ್ಯಾನೇಜರ್ ರಂಗನಾಥ ಎಸ್. ನೂಲಿಕರ್ ಅವರು ಎಸ್ಎಲ್ಬಿಸಿ ನಿರ್ದೇಶಕರ ಸಭೆಗೆ ವಿಷಯ ಪ್ರಸ್ತಾವನೆಯನ್ನು ಸಲ್ಲಿಸಿದ್ದರು.