ರೈತರ ಆದಾಯ ದ್ವಿಗುಣ, ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿ ಮಾಡುವುದಾಗಿ ಅಧಿಕಾರಕ್ಕೆ ಬಂದ ಬಿಜೆಪಿ ಕೇಂದ್ರದಲ್ಲಿ ಎರಡು ಬಾರಿ ಆಡಳಿತ ನಡೆಸಿದರೂ ರೈತರ ಅಭಿವೃದ್ಧಿ ಮಾಡಿಲ್ಲ. ಕೃಷಿ ಸಬ್ಸಿಡಿ ಕಡಿತ, ಕೃಷಿ ವೆಚ್ಚ ಹೆಚ್ಚು ಮಾಡಿದೆ. ಆದಾಯ ದ್ವಿಗುಣ ಮಾಡಿಲ್ಲ. ಜಾತ್ಯತೀತ ಪ್ರಜಾಪ್ರಭುತ್ವವನ್ನು ಪೂರ್ತಿ ನಾಶ ಮಾಡಿ ಸಂವಿಧಾನ ವಿರೋಧಿ ಆಡಳಿತ ನಡೆಸಿದೆ ಎಂದು ಶನಿವಾರ ಮಾಧ್ಯಮ ಗೋಷ್ಠಿಯಲ್ಲಿ ಆರೋಪಿಸಿದರು.