ಕವಿತಾಳ (ರಾಯಚೂರು ಜಿಲ್ಲೆ): ಅರಣ್ಯಕೃಷಿಯಲ್ಲಿ ಖ್ಯಾತಿ ಪಡೆದ ಕವಿತಾಳದ ರೈತ ಮಹಿಳೆ ಕವಿತಾ ಮಿಶ್ರಾ ಅವರ ತೋಟದಲ್ಲಿ ಕಳ್ಳರು ಮೂರು ಶ್ರೀಗಂಧ ಮರಗಳನ್ನು ಗುರುವಾರ ರಾತ್ರಿ ಕತ್ತರಿಸಿಕೊಂಡು ಹೋಗಿದ್ದು, ಈ ಸಂಬಂಧ ಕವಿತಾಳ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಶಂಕಾಸ್ಪದವಾಗಿ ಪಟ್ಟಣದ ಹೊರಭಾಗ ಶೆಡ್ ಹಾಕಿಕೊಂಡಿದ್ದ ಹೊರರಾಜ್ಯದ ವಲಸೆ ಜನರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿಸಲಾಗಿದೆ.
ತನಿಖೆ ನಡೆಯುತ್ತಿರುವುದರಿಂದ ಮಾಹಿತಿ ಬಹಿರಂಗಪಡಿಸಲು ಪೊಲೀಸರು ನಿರಾಕರಿಸಿದ್ದಾರೆ.