ರಾಯಚೂರು: ನಗರದಲ್ಲಿ ಬೀದಿ ವ್ಯಾಪಾರಸ್ಥರನ್ನು ತೆರವುಗೊಳಿಸಿದ ನಗರಸಭೆಯವರು ಪುನಃ ವ್ಯಾಪಾರ ನಡೆಸಲು ಅನುಕೂಲ ಮಾಡಬೇಕು ಎಂದು ಒತ್ತಾಯಿಸಿ ಹೈದರಾಬಾದ್ ಕರ್ನಾಟಕ ಬೀದಿ ವ್ಯಾಪಾರಿಗಳ ಸಂಘದ ನೇತೃತ್ವದಲ್ಲಿ ವ್ಯಾಪಾರಸ್ಥರು ಗುರುವಾರ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ಬೀದಿ ವ್ಯಾಪಾರಿಗಳ ಹಿತದೃಷ್ಟಿಯಿಂದ ’ಸ್ಟ್ರೀಟ್ ವೆಂಡರ್ಸ್ ಆ್ಯಕ್ಟ್ 2014ರ ಮಸೂದೆ’ ಜಾರಿಗೊಳಿಸಿದ್ದು, ಆದರೆ, ನಗರಸಭೆಯವರು ಬೀದಿ ಬದಿ ವ್ಯಾಪಾರಸ್ಥರ ಏಳಿಗೆಗೆ ಯಾವುದೇ ಕ್ರಮ ವಹಿಸದೇ ಬಡವರ ಮೇಲೆ ದರ್ಪವನ್ನು ತೋರಿಸಲಾಗಿದೆ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಆರೋಪಿಸಿದರು.
ನಾಲ್ಕು ತಿಂಗಳಿಗೊಮ್ಮೆ ಪೊಲೀಸ್ ಬಂದೋಬಸ್ತ್ನಲ್ಲಿ ನಗರಸಭೆ ಬೀದಿ ವ್ಯಾಪಾರಿಗಳನ್ನು ತೆರವು ಮಾಡುತ್ತಿದೆ. ವ್ಯಾಪಾರ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದ ವ್ಯಾಪಾರಿಗಳು ನಗರಸಭೆಯ ಧೋರಣೆಯಿಂದ ತೊಂದರೆ ಅನುಭವಿಸುತ್ತಿದ್ದು, ಬೀದಿಗೆ ಬೀಳುವಂತಾಗಿದೆ. ಐದು ಸಾವಿರ ಕುಟುಂಬಗಳು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಧ್ಯಕ್ಷ ಸೈಯದ್ ಮೊಹ್ಮದ್, ಸುನೀಲ್, ಸಂತೋಷ, ಜಾವೀದ್, ಖಾದರ್, ಪ್ರಕಾಶ, ಪದ್ಮಾವತಿ ಇದ್ದರು.