ಚಿರತೆ ದಾಳಿಯಿಂದಾಗಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರೆ 75ರ ಲಕ್ಕೇನಹಳ್ಳಿ ಗೇಟ್ ಬಳಿ ಗುರುವಾರ ನಡೆದಿದೆ. ಮೃತರನ್ನು ಜಯಮ್ಮ(55) ಎಂದು ಗುರುತಿಸಲಾಗಿದೆ. ಬಸ್ನಿಲ್ದಾಣದಲ್ಲಿ ಮಲಗುತ್ತಿದ್ದ ಅವರು ಅನಾಥೆ. ನೆರೆಹೊರೆಯವರು ನಿತ್ಯ ಆಹಾರ ನೀಡುತ್ತಿದ್ದರು. ಗುರುವಾರ ಸಂಜೆ ಚಿರತೆ ಅವರನ್ನು ಪೊದೆಗೆ ಎಳೆದೊಯ್ದು ದಾಳಿ ನಡೆಸಿದೆ.