ಚನ್ನಪಟ್ಟಣ: ನಗರದ ಮಂಗಳವಾರಪೇಟೆಯ ಯುವಕರು ತಮ್ಮ ವಾರ್ಡಿಲ್ಲಿದ್ದ ಸ್ಮಶಾನ ಜಾಗದಲ್ಲಿ ಬೆಳೆದಿದ್ದ ಗಿಡಗಂಟಿ ತೆರವುಗೊಳಿಸಿ ಸ್ವಚ್ಛತೆ ಮಾಡುವ ಮೂಲಕ ಹೊಸ ವರ್ಷವನ್ನು ವಿಶೇಷವಾಗಿ ಬರಮಾಡಿಕೊಂಡಿದ್ದಾರೆ.
ಭಾನುವಾರ ತಮ್ಮ ವಾರ್ಡಿನಲ್ಲಿದ್ದ ಸ್ಮಶಾನ ಜಾಗಕ್ಕೆ ಬಂದ ಯುವಕರು ಹಾಗೂ ಹಿರಿಯರು ಸ್ಮಶಾನದಲ್ಲಿ ದಟ್ಟವಾಗಿ ಬೆಳೆದಿದ್ದ ಗಿಡಗಂಟೆಗಳನ್ನು ತೆರವು ಮಾಡಿದರು. ನಂತರ ಅವುಗಳಿಗೆ ಬೆಂಕಿ ಹಚ್ಚಿ ಸ್ಮಶಾನವನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಿ ಗಮನ ಸೆಳೆದರು.
ಸ್ಮಶಾನದಲ್ಲಿ ಹಲವು ದಿನಗಳಿಂದ ಗಿಡಗಂಟಿ ಬೆಳೆದು ಪೊದೆಗಳು ನಿರ್ಮಾಣವಾಗಿದ್ದವು. ಸ್ಮಶಾನಕ್ಕೆ ಬರುವ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿತ್ತು. ಇದನ್ನು ಅರಿತು ಹೊಸ ವರ್ಷದ ಮುನ್ನಾ ದಿನ ಸ್ವಚ್ಛತಾ ಅಭಿಯಾನ ಕೈಗೊಂಡು ಹೊಸ ವರ್ಷವನ್ನು ವಿಶೇಷವಾಗಿ ಆಚರಿಸಿದ್ದಾರೆ.
ಶ್ರಮದಾನದಲ್ಲಿ ಮಂಗಳವಾರಪೇಟೆಯ ವಕೀಲ ಕುಮಾರ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಕೆಂಪರಾಜು, ಯುವ ಮುಖಂಡ ಎಂ.ವಿ. ಶ್ರೀನಿವಾಸ್, ಯುವಕರಾದ ಮಂಜು, ಕೇಶವ, ಲೋಕೇಶ್, ದೇವರಾಜು, ಜ್ಯೋತಿ, ಸಂಜಯ್, ಭರತ್, ಕೈಲಾಸಿ, ಸಂಜಯ್, ಕಿರಣ್, ದಿಲೀಪ್, ಸುನೀಲ್, ಮಣಿ, ರಾಹುಲ್ ಭಾಗವಹಿಸಿದ್ದರು.