<p><strong>ಕನಕಪುರ:</strong> ಗ್ರಾಮಸ್ಥರ ದೂರಿನ ಮೇರೆಗೆ ಒತ್ತುವರಿಯಾಗಿದ್ದ ನಕಾಶೆ ರಸ್ತೆಯನ್ನು ಪೊಲೀಸರು ಮತ್ತು ಸರ್ವೇ ಇಲಾಖೆ ಅಧಿಕಾರಿಗಳು ಗುರುವಾರ ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸಿದರು.</p>.<p>ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ದೊಡ್ಡ ಆಲಹಳ್ಳಿ ಗ್ರಾಮದ ಸರ್ಕಾರಿ ನಕಾಶೆ ರಸ್ತೆಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದರಿಂದ ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗುತ್ತಿದ್ದು, ತೆರವುಗೊಳಿಸುವಂತೆ ಗ್ರಾಮಸ್ಥರು ತಾಲ್ಲೂಕು ಆಡಳಿತಕ್ಕೆ ದೂರು ಸಲ್ಲಿಸಿದ್ದರು.</p>.<p>ತಹಶೀಲ್ದಾರ್ ಆದೇಶದಂತೆ ಉಪ ತಹಶೀಲ್ದಾರ್ ಹನುಮಂತ ಕುಮಾರ್, ರಾಜಸ್ವ ನಿರೀಕ್ಷಕ ರಜತ್ ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಾತನೂರು ಪೊಲೀಸರು ಒತ್ತುವರಿಯಾಗಿದ್ದ ನಕಾಶೆ ರಸ್ತೆಯನ್ನು ಸರ್ವೆ ನಡೆಸಿ ತೆರವುಗೊಳಿಸಿದರು.</p>.<p>ನಕಾಶೆ ರಸ್ತೆಯ ಸುಮಾರು ಎಂಟು ಅಡಿ ಅಗಲವಿದ್ದ ಕಾಲುದಾರಿ ರಸ್ತೆಯನ್ನು ಒಂದು ಕಿಲೋಮೀಟರ್ವರೆಗೆ ಒತ್ತುವರಿ ಮಾಡಿದ್ದು, ಒತ್ತುವರಿಯಾಗಿದ್ದ ರಸ್ತೆ ಜಾಗವನ್ನು ಅಧಿಕಾರಿಗಳು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ:</strong> ಗ್ರಾಮಸ್ಥರ ದೂರಿನ ಮೇರೆಗೆ ಒತ್ತುವರಿಯಾಗಿದ್ದ ನಕಾಶೆ ರಸ್ತೆಯನ್ನು ಪೊಲೀಸರು ಮತ್ತು ಸರ್ವೇ ಇಲಾಖೆ ಅಧಿಕಾರಿಗಳು ಗುರುವಾರ ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸಿದರು.</p>.<p>ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ದೊಡ್ಡ ಆಲಹಳ್ಳಿ ಗ್ರಾಮದ ಸರ್ಕಾರಿ ನಕಾಶೆ ರಸ್ತೆಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದರಿಂದ ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗುತ್ತಿದ್ದು, ತೆರವುಗೊಳಿಸುವಂತೆ ಗ್ರಾಮಸ್ಥರು ತಾಲ್ಲೂಕು ಆಡಳಿತಕ್ಕೆ ದೂರು ಸಲ್ಲಿಸಿದ್ದರು.</p>.<p>ತಹಶೀಲ್ದಾರ್ ಆದೇಶದಂತೆ ಉಪ ತಹಶೀಲ್ದಾರ್ ಹನುಮಂತ ಕುಮಾರ್, ರಾಜಸ್ವ ನಿರೀಕ್ಷಕ ರಜತ್ ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಾತನೂರು ಪೊಲೀಸರು ಒತ್ತುವರಿಯಾಗಿದ್ದ ನಕಾಶೆ ರಸ್ತೆಯನ್ನು ಸರ್ವೆ ನಡೆಸಿ ತೆರವುಗೊಳಿಸಿದರು.</p>.<p>ನಕಾಶೆ ರಸ್ತೆಯ ಸುಮಾರು ಎಂಟು ಅಡಿ ಅಗಲವಿದ್ದ ಕಾಲುದಾರಿ ರಸ್ತೆಯನ್ನು ಒಂದು ಕಿಲೋಮೀಟರ್ವರೆಗೆ ಒತ್ತುವರಿ ಮಾಡಿದ್ದು, ಒತ್ತುವರಿಯಾಗಿದ್ದ ರಸ್ತೆ ಜಾಗವನ್ನು ಅಧಿಕಾರಿಗಳು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>