‘ಸಮಿತಿಯಲ್ಲಿ 6 ಜೆಡಿಎಸ್ ಬೆಂಬಲಿತರು, 3 ನಾಮನಿರ್ದೇಶಿತರು ಸೇರಿ 9 ಮತಗಳು ಸಿಗುವ ನಿರೀಕ್ಷೆಯೊಂದಿಗೆ ಸ್ಪರ್ಧೆ ಮಾಡಿದ್ದೆ. ಬಿಜೆಪಿ ಬೆಂಬಲ ದೊರೆಯುವ ಭರವಸೆ ದೊರೆತಿತ್ತು. ಆದರೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಹುಲುವಾಡಿ ದೇವರಾಜು, ಮಾಗಡಿ ಕ್ಷೇತ್ರದ ಅಧ್ಯಕ್ಷ ಧನಂಜಯ ಕಾಂಗ್ರೆಸ್ ಜೊತೆ ಕೈ ಜೋಡಿಸಿ ನಮಗೆ ಅಧಿಕಾರ ತಪ್ಪಿಸಿದ್ದಾರೆ. ಇದೆಲ್ಲ ನೋಡುತ್ತಿದ್ದರೆ ಕಾಂಗ್ರೆಸ್, ಬಿಜೆಪಿಯ ಬಿ ಟೀಂ ಎನಿಸುತ್ತಿದೆ’ ಎಂದು ಟೀಕಿಸಿದರು.