<p><strong>ಬಿಡದಿ: </strong>ಬೈರಮಂಗಲ ಗ್ರಾಮದ ಪುಟ್ಟಣ್ಣಯ್ಯನವರ ಮನೆಯಿಂದ ಹಾರೋಹಳ್ಳಿ ಮುಖ್ಯರಸ್ತೆವರೆಗೆ ಡಾಂಬರೀಕರಣ ಹಾಗೂ ಕೆಂಪಶೆಟ್ಟಿದೊಡ್ಡಿ ಗ್ರಾಮದ ಬೈರಮಂಗಲ ಹಾರೋಹಳ್ಳಿ ಮುಖ್ಯರಸ್ತೆಯಿಂದ ನಾಗಣ್ಣನವರ ಮನೆವರೆಗೆ ಸಿ.ಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಎ. ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು.</p>.<p>ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಡದಿ ಭಾಗದಲ್ಲಿ ಸ್ಮಾರ್ಟ್ಸಿಟಿ ಯೋಜನೆ ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ಅನುಕೂಲವಾಗುವ ರೀತಿಯಲ್ಲಿ ಸ್ಪಂದಿಸುತ್ತಿದ್ದೇವೆ. ರೈತರಿಗೂ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದರು.</p>.<p>ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಕೆಐಎಡಿಬಿಯಿಂದ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ದರ ನಿಗದಿಯಾಗಿದೆ. ಭೂ ಮಾಲೀಕರು ಹಣ ಪಡೆದುಕೊಳ್ಳುತ್ತಾರೆ. ಉಳಿದ ರೈತರಿಗೆ ಕೆಐಎಡಿಬಿ ಅಥವಾ ಬಿಡಿಎ ವತಿಯಿಂದ ಪರಿಹಾರ ಕೊಡಿಸುತ್ತೇವೆ. ಹಾಗೊಂದು ವೇಳೆ ರೈತರು ಜಮೀನು ಬೇಕೇ ಬೇಕು ಎಂದರೆ ಉಳಿಸಿ ಕೊಡುತ್ತೇವೆ ಎಂದರು.</p>.<p>ಕೈಗಾರಿಕಾ ಪ್ರದೇಶಕ್ಕೆ ಸ್ಥಳೀಯರು ವಿರೋಧ ಮಾಡುತ್ತಿಲ್ಲ. ಜಮೀನನ್ನು ಕರಾರು ಮಾಡಿಕೊಂಡವರು ಹಾಗೂ ಜಮೀನು ವ್ಯಾಜ್ಯ ಇರುವವರಿಗೆ ಪರಿಹಾರದ ಹಣ ಬೇರೆಯವರಿಗೆ ಹೋಗುತ್ತದೆ ಎಂಬ ಆತಂಕ ಕಾಡುತ್ತಿದೆ. ಅವರಿಂದ ಇಷ್ಟೆಲ್ಲಾ ಗೊಂದಲ ಸೃಷ್ಟಿಯಾಗುತ್ತಿದೆ ಎಂದು ಹೇಳಿದರು.</p>.<p>ರೈತರು, ಯುವಕ, ಯುವತಿಯರಿಗೆ ಒಳ್ಳೆಯದಾಗಬೇಕು ಎಂಬ ಉದ್ದೇಶದಿಂದ ಕೈಗಾರಿಕಾ ಪ್ರದೇಶ ಮಾಡಲಾಗುತ್ತಿದೆ. ಯಾರು ಎಷ್ಟೇ ಷಡ್ಯಂತ್ರ ನಡೆಸಿದರೂ ಕೈಗಾರಿಕಾ ಪ್ರದೇಶ ಸ್ಥಾಪನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.</p>.<p>ಜೆಡಿಎಸ್ ಮುಳುಗುತ್ತಿರುವ ಹಡಗೋ ಅಥವಾ ಬಿಜೆಪಿ ಮುಳುಗುತ್ತಿರುವ ಹಡಗೋ ಎಂಬುದಕ್ಕೆ ನಾಡಿನ ಜನರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತೀರ್ಪು ನೀಡುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.</p>.<p>ಬೈರಮಂಗಲ ವಿಎಸ್ಎಸ್ಎನ್ ಮಾಜಿ ಅಧ್ಯಕ್ಷ ಎಚ್.ಎಸ್ .ಸಿದ್ದರಾಜು, ಬಿಡದಿ ರೈತ ಸೇವಾ ಸಹಕಾರ ಸಂಘದ ಮಾಜಿ ಅಧ್ಯಕ್ಷ ನರಸಿಂಹಯ್ಯ, ಬೈರಮಂಗಲ ಗ್ರಾಮ ಪಂಚಾಯಿತಿ ಸದಸ್ಯ ಶಿವಣ್ಣ, ಕುಮಾರಸ್ವಾಮಿ, ಸೋಮೇಗೌಡ, ನಾಗರಾಜು, ಹೇಮಂತ್, ಪುರುಷೋತ್ತಮ್, ನಿತ್ಯಾನಂದ, ನಾರಾಯಣಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಿಡದಿ: </strong>ಬೈರಮಂಗಲ ಗ್ರಾಮದ ಪುಟ್ಟಣ್ಣಯ್ಯನವರ ಮನೆಯಿಂದ ಹಾರೋಹಳ್ಳಿ ಮುಖ್ಯರಸ್ತೆವರೆಗೆ ಡಾಂಬರೀಕರಣ ಹಾಗೂ ಕೆಂಪಶೆಟ್ಟಿದೊಡ್ಡಿ ಗ್ರಾಮದ ಬೈರಮಂಗಲ ಹಾರೋಹಳ್ಳಿ ಮುಖ್ಯರಸ್ತೆಯಿಂದ ನಾಗಣ್ಣನವರ ಮನೆವರೆಗೆ ಸಿ.ಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಎ. ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು.</p>.<p>ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಡದಿ ಭಾಗದಲ್ಲಿ ಸ್ಮಾರ್ಟ್ಸಿಟಿ ಯೋಜನೆ ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ಅನುಕೂಲವಾಗುವ ರೀತಿಯಲ್ಲಿ ಸ್ಪಂದಿಸುತ್ತಿದ್ದೇವೆ. ರೈತರಿಗೂ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದರು.</p>.<p>ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಕೆಐಎಡಿಬಿಯಿಂದ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ದರ ನಿಗದಿಯಾಗಿದೆ. ಭೂ ಮಾಲೀಕರು ಹಣ ಪಡೆದುಕೊಳ್ಳುತ್ತಾರೆ. ಉಳಿದ ರೈತರಿಗೆ ಕೆಐಎಡಿಬಿ ಅಥವಾ ಬಿಡಿಎ ವತಿಯಿಂದ ಪರಿಹಾರ ಕೊಡಿಸುತ್ತೇವೆ. ಹಾಗೊಂದು ವೇಳೆ ರೈತರು ಜಮೀನು ಬೇಕೇ ಬೇಕು ಎಂದರೆ ಉಳಿಸಿ ಕೊಡುತ್ತೇವೆ ಎಂದರು.</p>.<p>ಕೈಗಾರಿಕಾ ಪ್ರದೇಶಕ್ಕೆ ಸ್ಥಳೀಯರು ವಿರೋಧ ಮಾಡುತ್ತಿಲ್ಲ. ಜಮೀನನ್ನು ಕರಾರು ಮಾಡಿಕೊಂಡವರು ಹಾಗೂ ಜಮೀನು ವ್ಯಾಜ್ಯ ಇರುವವರಿಗೆ ಪರಿಹಾರದ ಹಣ ಬೇರೆಯವರಿಗೆ ಹೋಗುತ್ತದೆ ಎಂಬ ಆತಂಕ ಕಾಡುತ್ತಿದೆ. ಅವರಿಂದ ಇಷ್ಟೆಲ್ಲಾ ಗೊಂದಲ ಸೃಷ್ಟಿಯಾಗುತ್ತಿದೆ ಎಂದು ಹೇಳಿದರು.</p>.<p>ರೈತರು, ಯುವಕ, ಯುವತಿಯರಿಗೆ ಒಳ್ಳೆಯದಾಗಬೇಕು ಎಂಬ ಉದ್ದೇಶದಿಂದ ಕೈಗಾರಿಕಾ ಪ್ರದೇಶ ಮಾಡಲಾಗುತ್ತಿದೆ. ಯಾರು ಎಷ್ಟೇ ಷಡ್ಯಂತ್ರ ನಡೆಸಿದರೂ ಕೈಗಾರಿಕಾ ಪ್ರದೇಶ ಸ್ಥಾಪನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.</p>.<p>ಜೆಡಿಎಸ್ ಮುಳುಗುತ್ತಿರುವ ಹಡಗೋ ಅಥವಾ ಬಿಜೆಪಿ ಮುಳುಗುತ್ತಿರುವ ಹಡಗೋ ಎಂಬುದಕ್ಕೆ ನಾಡಿನ ಜನರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತೀರ್ಪು ನೀಡುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.</p>.<p>ಬೈರಮಂಗಲ ವಿಎಸ್ಎಸ್ಎನ್ ಮಾಜಿ ಅಧ್ಯಕ್ಷ ಎಚ್.ಎಸ್ .ಸಿದ್ದರಾಜು, ಬಿಡದಿ ರೈತ ಸೇವಾ ಸಹಕಾರ ಸಂಘದ ಮಾಜಿ ಅಧ್ಯಕ್ಷ ನರಸಿಂಹಯ್ಯ, ಬೈರಮಂಗಲ ಗ್ರಾಮ ಪಂಚಾಯಿತಿ ಸದಸ್ಯ ಶಿವಣ್ಣ, ಕುಮಾರಸ್ವಾಮಿ, ಸೋಮೇಗೌಡ, ನಾಗರಾಜು, ಹೇಮಂತ್, ಪುರುಷೋತ್ತಮ್, ನಿತ್ಯಾನಂದ, ನಾರಾಯಣಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>