‘ಉಳುಮೆ ಮಾಡುತ್ತಿದ್ದಾಗ ಜಮೀನಿನ ಪಕ್ಕದ ಬೇಲಿಯ ಮರೆಯಿಂದ ಬಂದ ಆನೆ, ಏಕಾಏಕಿ ದಾಳಿ ಮಾಡಿ, ಸೊಂಡಿಲಿನಿಂದ ಎತ್ತಿ ಎಸೆಯಿತು. ಪರಿಣಾಮ ನೆಲಕ್ಕೆ ಬಿದ್ದು ಪ್ರಜ್ಞೆ ತಪ್ಪಿದೆ. ಅಷ್ಟಕ್ಕೆ ಆನೆ ಮುಂದೆ ಹೋಗಿದೆ. ದೇವರ ದಯೆಯಿಂದ ಬದುಕಿಕೊಂಡೆ’ ಎಂದು ರೈತ ವಿಷಕಂಠಯ್ಯ ತಿಳಿಸಿದರು. ಅವರಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.