ಚನ್ನಪಟ್ಟಣ: ವಕೀಲರ ಸಂಘದ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಟಿ.ವಿ.ಗಿರೀಶ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶಿವರಾಜು ಆಯ್ಕೆಯಾಗಿದ್ದಾರೆ.
ಇಲ್ಲಿನ ನ್ಯಾಯಾಲಯದ ಸಭಾಂಗಣದಲ್ಲಿ ಶನಿವಾರ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಗಿರೀಶ್, ಬೋಜೇಗೌಡ ಹಾಗೂ ಜೆ.ಟಿ.ಪ್ರಕಾಶ್ ಸ್ಪರ್ಧಿಸಿದ್ದರು. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ವಕೀಲರಾದ ಶಿವರಾಜು ಹಾಗೂ ಶ್ರೀಧರ್ ನಾಮಪತ್ರ ಸಲ್ಲಿಸಿದ್ದರು.
ಉಪಾಧ್ಯಕ್ಷರಾಗಿ ಕೆ.ಟಿ.ರವಿ, ಖಜಾಂಚಿಯಾಗಿ ದೇವರಾಜು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೃಷ್ಣಪ್ಪ, ವಸಂತಮ್ಮ, ಅಂಬಿಕಾ, ಶಶಿಕುಮಾರ್, ದೇವರಾಜು, ಹನುಮಂತ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಶಿವರಾಜೇಗೌಡ, ನಾಗರಾಜಯ್ಯ, ಮಂಜು ಕಾರ್ಯ ನಿರ್ವಹಿಸಿದರು.