<p><strong>ಚನ್ನಪಟ್ಟಣ</strong>: ಶಾಲೆ ತೆರೆಯದಿದ್ದರೂ ಶಿಕ್ಷಕರಿಗೆ ಮತ್ತು ಸಿಬ್ಬಂದಿಗೆ ಧನಸಹಾಯ ಮತ್ತು ದಿನಸಿ ಕಿಟ್ ನೀಡುತ್ತಿರುವುದು ಮಾನವೀಯ ಕಾರ್ಯ ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸು.ತ.ರಾಮೇಗೌಡ ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನ ಅವ್ವೇರಹಳ್ಳಿ ಗ್ರಾಮದಲ್ಲಿ ಡಾ.ಎಚ್.ಕೆ. ಶಾಂತಾ ಮರಿಯಪ್ಪ ಕಾನ್ವೆಂಟ್ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ಸಿಬ್ಬಂದಿಗೆ ಧನಸಹಾಯ, ದಿನಸಿ ಕಿಟ್ ವಿತರಿಸಿಮಾತನಾಡಿದರು.</p>.<p>ಕೊರೊನಾ ವೇಳೆ ಶಾಲೆಗಳು ಮುಚ್ಚಿದ್ದರಿಂದ ಹಲವಾರು ಮಂದಿಗೆ ತೊಂದರೆ ಎದುರಾಯಿತು. ಅದರಲ್ಲೂ ಖಾಸಗಿ ಶಾಲೆಗಳ ಶಿಕ್ಷಕರು ಬಹಳ ತೊಂದರೆ ಎದುರಿಸುವಂತಾಯಿತು. ಇಂತಹ ವೇಳೆ ಕಾನ್ವೆಂಟ್ ಆಡಳಿತ ಮಂಡಳಿ ಶಾಲೆ ತೆರೆಯದಿದ್ದರೂ ಶಿಕ್ಷಕರು, ಸಿಬ್ಬಂದಿಗೆ ₹ 5 ಸಾವಿರ ಧನಸಹಾಯ, ದಿನಸಿ ಕಿಟ್ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ಪ್ರತಿಯೊಂದು ಖಾಸಗಿ ಶಾಲೆಗಳು ಇಂತಹ ಮಾನವೀಯ ಕಾರ್ಯಕ್ಕೆ ಮುಂದಾಗಬೇಕು ಎಂದರು.</p>.<p>ಎಚ್.ಕೆ. ವೀರಣ್ಣಗೌಡ ಶಾಲೆಯ ಮುಖ್ಯ ಶಿಕ್ಷಕ ಶೌಕತ್ ಅಲಿ ಮಾತನಾಡಿ, ಮರಿಯಪ್ಪ ಅವರು ಬಡವರ ಮೇಲೆ ಕರುಣೆ ತೋರುವಂತಹ ಹೃದಯವಂತರು ಎಂದರು.</p>.<p>ಕಾನ್ವೆಂಟ್ನ ಮುಖ್ಯ ಶಿಕ್ಷಕ ವರದರಾಜು ಮಾತನಾಡಿ, ಕಳೆದ ಒಂದೂವರೆ ವರ್ಷಗಳ ಕಾಲ ಶಾಲೆ ತೆರೆಯದ ಕಾರಣ ಶಿಕ್ಷಕರು, ಸಿಬ್ಬಂದಿಸಂಕಷ್ಟವನ್ನು ಅರಿತು ನಾಲ್ಕನೇ ಬಾರಿಗೆ ಶಿಕ್ಷಕರಿಗೆ ಧನಸಹಾಯ ಮಾಡುತ್ತಿದ್ದಾರೆ. ಧನಸಹಾಯದ ಜೊತೆಗೆ ಈ ಬಾರಿ ದಿನಸಿ ಕಿಟ್ ಸಹ ನೀಡುತ್ತಿದ್ದಾರೆ ಎಂದರು.</p>.<p>ಕಾರ್ಯಕ್ರಮದಲ್ಲಿ ಮದ್ದೂರು ಶಾಂತಾ ಮರಿಯಪ್ಪ ಪಬ್ಲಿಕ್ ಶಾಲೆ, ಅವ್ವೇರಹಳ್ಳಿ ಕಾನ್ವೆಂಟ್ನ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗೆ ಚೆಕ್ ಮತ್ತು ದಿನಸಿ ಕಿಟ್ವಿತರಿಸಲಾಯಿತು.</p>.<p>ಅಕ್ಕೂರು ಗ್ರಾ.ಪಂ.ಅಧ್ಯಕ್ಷ ಅಶೋಕ, ಸದಸ್ಯೆ ಪ್ರಿಯಾ ಉಮೇಶ್, ಶಾಲೆಯ ಆಡಳಿತ ಮಂಡಳಿಯ ಹರೀಶ್, ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಗೋ.ರಾ. ಶ್ರೀನಿವಾಸ, ಪತ್ರಕರ್ತ ಹರೀಶ್ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಪಟ್ಟಣ</strong>: ಶಾಲೆ ತೆರೆಯದಿದ್ದರೂ ಶಿಕ್ಷಕರಿಗೆ ಮತ್ತು ಸಿಬ್ಬಂದಿಗೆ ಧನಸಹಾಯ ಮತ್ತು ದಿನಸಿ ಕಿಟ್ ನೀಡುತ್ತಿರುವುದು ಮಾನವೀಯ ಕಾರ್ಯ ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸು.ತ.ರಾಮೇಗೌಡ ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನ ಅವ್ವೇರಹಳ್ಳಿ ಗ್ರಾಮದಲ್ಲಿ ಡಾ.ಎಚ್.ಕೆ. ಶಾಂತಾ ಮರಿಯಪ್ಪ ಕಾನ್ವೆಂಟ್ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ಸಿಬ್ಬಂದಿಗೆ ಧನಸಹಾಯ, ದಿನಸಿ ಕಿಟ್ ವಿತರಿಸಿಮಾತನಾಡಿದರು.</p>.<p>ಕೊರೊನಾ ವೇಳೆ ಶಾಲೆಗಳು ಮುಚ್ಚಿದ್ದರಿಂದ ಹಲವಾರು ಮಂದಿಗೆ ತೊಂದರೆ ಎದುರಾಯಿತು. ಅದರಲ್ಲೂ ಖಾಸಗಿ ಶಾಲೆಗಳ ಶಿಕ್ಷಕರು ಬಹಳ ತೊಂದರೆ ಎದುರಿಸುವಂತಾಯಿತು. ಇಂತಹ ವೇಳೆ ಕಾನ್ವೆಂಟ್ ಆಡಳಿತ ಮಂಡಳಿ ಶಾಲೆ ತೆರೆಯದಿದ್ದರೂ ಶಿಕ್ಷಕರು, ಸಿಬ್ಬಂದಿಗೆ ₹ 5 ಸಾವಿರ ಧನಸಹಾಯ, ದಿನಸಿ ಕಿಟ್ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ಪ್ರತಿಯೊಂದು ಖಾಸಗಿ ಶಾಲೆಗಳು ಇಂತಹ ಮಾನವೀಯ ಕಾರ್ಯಕ್ಕೆ ಮುಂದಾಗಬೇಕು ಎಂದರು.</p>.<p>ಎಚ್.ಕೆ. ವೀರಣ್ಣಗೌಡ ಶಾಲೆಯ ಮುಖ್ಯ ಶಿಕ್ಷಕ ಶೌಕತ್ ಅಲಿ ಮಾತನಾಡಿ, ಮರಿಯಪ್ಪ ಅವರು ಬಡವರ ಮೇಲೆ ಕರುಣೆ ತೋರುವಂತಹ ಹೃದಯವಂತರು ಎಂದರು.</p>.<p>ಕಾನ್ವೆಂಟ್ನ ಮುಖ್ಯ ಶಿಕ್ಷಕ ವರದರಾಜು ಮಾತನಾಡಿ, ಕಳೆದ ಒಂದೂವರೆ ವರ್ಷಗಳ ಕಾಲ ಶಾಲೆ ತೆರೆಯದ ಕಾರಣ ಶಿಕ್ಷಕರು, ಸಿಬ್ಬಂದಿಸಂಕಷ್ಟವನ್ನು ಅರಿತು ನಾಲ್ಕನೇ ಬಾರಿಗೆ ಶಿಕ್ಷಕರಿಗೆ ಧನಸಹಾಯ ಮಾಡುತ್ತಿದ್ದಾರೆ. ಧನಸಹಾಯದ ಜೊತೆಗೆ ಈ ಬಾರಿ ದಿನಸಿ ಕಿಟ್ ಸಹ ನೀಡುತ್ತಿದ್ದಾರೆ ಎಂದರು.</p>.<p>ಕಾರ್ಯಕ್ರಮದಲ್ಲಿ ಮದ್ದೂರು ಶಾಂತಾ ಮರಿಯಪ್ಪ ಪಬ್ಲಿಕ್ ಶಾಲೆ, ಅವ್ವೇರಹಳ್ಳಿ ಕಾನ್ವೆಂಟ್ನ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗೆ ಚೆಕ್ ಮತ್ತು ದಿನಸಿ ಕಿಟ್ವಿತರಿಸಲಾಯಿತು.</p>.<p>ಅಕ್ಕೂರು ಗ್ರಾ.ಪಂ.ಅಧ್ಯಕ್ಷ ಅಶೋಕ, ಸದಸ್ಯೆ ಪ್ರಿಯಾ ಉಮೇಶ್, ಶಾಲೆಯ ಆಡಳಿತ ಮಂಡಳಿಯ ಹರೀಶ್, ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಗೋ.ರಾ. ಶ್ರೀನಿವಾಸ, ಪತ್ರಕರ್ತ ಹರೀಶ್ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>