ಶಾಸಕ ಎ.ಮಂಜುನಾಥ ಮಾತನಾಡಿ, ‘ರಾಜಕೀಯದಲ್ಲಿ ನನಗೆ ಎಚ್.ಎಂ.ರೇವಣ್ಣ ಗುರು ಮತ್ತು ಮಾರ್ಗದರ್ಶಕರು. ಅವರ ಜನಸೇವೆ ನನಗೆ ಮೆಚ್ಚುಗೆಯಾಯಿತು. ಅವರನ್ನು ಇಂದಿಗೂ ನಾಡಿನ ಜನ ಗುರುತಿಸುತ್ತಿದ್ದಾರೆ’ ಎಂದರು.
ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಮಾತನಾಡಿ, ‘ಸಿದ್ದಗಂಗಾ ಕ್ಷೇತ್ರದ ಡಾ.ಶಿವಕುಮಾರಸ್ವಾಮೀಜಿ ಮತ್ತು ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ ಕೃಪಾಶೀರ್ವಾದ ಮತ್ತು ಮಾಗಡಿ ಕ್ಷೇತ್ರದ ಜನತೆಯ ಪ್ರೋತ್ಸಾಹದಿಂದ ನಾನು ರಾಜಕೀಯ ರಂಗದಲ್ಲಿ ಬೆಳೆದಿದ್ದೇನೆ. ದೇವರ ದಯೆಯಿಂದ ನನ್ನ ಕೈಲಾದಮಟ್ಟಿಗೆ ಸೇವೆ ಸಲ್ಲಿಸಿದ್ದೇನೆ’ ಎಂದರು.
ಕಾಂಗ್ರೆಸ್ ಮುಖಂಡರಾದ ಬಿ.ಎಸ್.ಪುಟ್ಟರಾಜು, ಅಗಲಕೋಟೆ ನರಸಿಂಹಮೂರ್ತಿ, ಎಚ್.ಎನ್.ಅಶೋಕ್, ಕುದೂರು ಚಂದ್ರಶೇಖರ್ ರೇವಣ್ಣ ಅವರನ್ನು ಸನ್ಮಾನಿಸಿದರು.