ರಾಮನಗರ: ಇಲ್ಲಿನ ಮಂಡಿಪೇಟೆಯ ಉದ್ಯಮಿ ಬಿ.ಕೆ. ಕೃಷ್ಣಮೂರ್ತಿ (67) ಶುಕ್ರವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ ಸಿ.ಎಂ. ಗಿರಿಜಮ್ಮ, ಮೂವರು ಪುತ್ರರು ಇದ್ದಾರೆ.
ಅವರು ಭಾರತ್ ವಿಕಾಸ ಪರಿಷದ್ ನ ಅಧ್ಯಕ್ಷರಾಗಿ ಹಾಗೂ ರೆಡ್ ಕ್ರಾಸ್ ಸಂಸ್ಥೆ, ಶಿರಡಿ ಸಾಯಿಬಾಬಾ ಟ್ರಸ್ಟ್ ಸೇರಿದಂತೆ ವಿವಿಧ ಸಂಘಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಶುಕ್ರವಾರ ಸಂಜೆ ಇಲ್ಲಿನ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು.