ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ: ಕಸದ ರಾಶಿ ತೆರವು ಯಾವಾಗ?

Published 12 ಜುಲೈ 2023, 12:27 IST
Last Updated 12 ಜುಲೈ 2023, 12:27 IST
ಅಕ್ಷರ ಗಾತ್ರ

ಕನಕಪುರ: ನಗರದ ಅರ್ಕಾವತಿ ಚಿತ್ರಮಂದಿರ ಪಕ್ಕದ ಮಾರುತಿ ಆಟೊ ನಿಲ್ದಾಣದ ಮುಂಭಾಗದಲ್ಲಿನ ಮೋರಿಯ ಪಕ್ಕದಲ್ಲಿ ಅಂಗಡಿ ಮತ್ತು ಹೋಟೆಲ್‌ನವರು ಪ್ಲಾಸ್ಟಿಕ್‌ ಮತ್ತು ಇತರೆ ತ್ಯಾಜ್ಯಗಳನ್ನು ಸುರಿಯುತ್ತಿದ್ದಾರೆ.

ಎಲ್ಲ ತ್ಯಾಜ್ಯವು ಮೋರಿಗೆ ಹೋಗುತ್ತದೆ ಮತ್ತು ಕೆಟ್ಟ ವಾಸನೆ ಬರುತ್ತದೆ. ಬಸ್‌ ನಿಲ್ದಾಣ ಮತ್ತು ಆಟೊ ನಿಲ್ದಾಣ ಅಲ್ಲಿಯೇ ಇರುವುದರಿಂದ ಆಟೊ, ಬಸ್ಸಿಗೆ ಹೋಗಲು ಕಾಯುವ ಜನರು ಕಸದ ರಾಶಿಯ ಮುಂದೆ ನಿಲ್ಲಬೇಕಿದೆ. ಗಬ್ಬು ವಾಸನೆಯನ್ನು ಸಹಿಸಿಕೊಳ್ಳಬೇಕಿದೆ. ಅದಲ್ಲದೆ ನಾಯಿಗಳು ಕಸವನ್ನು ರಸ್ತೆಗೆಲ್ಲಾ ಎಳೆದಾಡಿ ಗಲೀಜು ಮಾಡುತ್ತವೆ. ನಗರಸಭೆಯವರು ಇದರ ವಿರುದ್ಧ ಕ್ರಮಕೈಗೊಂಡು ಕಸ ಹಾಕದಂತೆ ತಡೆಗಟ್ಟಬೇಕು.

ಆಟೊ ಚಾಲಕರು, ಮಾರುತಿ ಆಟೊ ನಿಲ್ದಾಣ ಕನಕಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT