ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅಭಿಮಾನಿಗಳ ಬಳಗ ಹಾಗೂ ಹಳ್ಳಿಕಾರ್ ಗೆಳೆಯರ ಬಳಗದಿಂದ ಮೊದಲನೇ ವರ್ಷದ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದಕ್ಕೆ ಬೇಕಾದ ಸಿದ್ಧತೆಗಳೂ ನಡೆದಿದ್ದವು. ಆದರೆ, ಸತತ ಮಳೆಯಿಂದ ಸ್ಪರ್ಧೆ ನಡೆಸುವ ಮೈದಾನ ಒದ್ದೆಯಾಗಿದೆ. ಹಾಗಾಗಿ, ಸ್ಪರ್ಧೆ ನಡೆಸುವುದು ಸೂಕ್ತವಲ್ಲವೆಂದು ತೀರ್ಪುಗಾರರು ತೀರ್ಮಾನಿಸಿರುವ ಕಾರಣ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.