ಚೌಕಟ್ಟು ಮೀರಿ ಮಾತನಾಡಲ್ಲ: ‘ಮೂರು ಪಕ್ಷಗಳ ಸರ್ಕಾರ’ ಎಂಬ ಸಿ.ಪಿ. ಯೋಗೇಶ್ವರ್ ಹೇಳಿಕೆ ಕುರಿತು ಕೆಆರ್ಐಡಿಎಲ್ ಅಧ್ಯಕ್ಷ ಎಂ. ರುದ್ರೇಶ್ ರಾಮನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ‘ಅವರೇಕೆ ಹೀಗೆ ಹೇಳುತ್ತಿದ್ದಾರೆಯೋ ನನಗೆ ಗೊತ್ತಿಲ್ಲ. ಅದರ ಬಗ್ಗೆ ಪ್ರತಿಕ್ರಿಯಿಸುವಷ್ಟೊ ದೊಡ್ಡವನು ನಾನಲ್ಲ’ ಎಂದು ಹೇಳಿದರು. ‘ನಾನು ಬಿಜೆಪಿ ಕಟ್ಟಾಳು, ಪಕ್ಷದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಚೌಕಟ್ಟು ಮೀರಿ ಮಾತನಾಡುವುದು ಇಷ್ಟವಿಲ್ಲ’ ಎಂದರು.