ಮಾಗಡಿ: ಮಾದಿಗೊಂಡನಹಳ್ಳಿ ಗುಡ್ಡದ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಡಿ.18ರಂದು ಬೆಳಿಗ್ಗೆ 5.30ರಿಂದ ಸಂಜೆ 6ರವರೆಗೆ ವೈಕುಂಠ ಏಕಾದಶಿ ಅಂಗವಾಗಿ ಭಕ್ತರಿಗೆ ವಿಶೇಷ ದರ್ಶನದ ವ್ಯವಸ್ಥೆ ಮಾಡಲಾಗಿದೆ ಎಂದು ರಂಗನಾಥ ಸ್ವಾಮಿ ಅಭಿವೃದ್ಧಿ ಸೇವಾ ಟ್ರಸ್ಟ್ನ ಅಧ್ಯಕ್ಷ ವೀರಪ್ಪ ತಿಳಿಸಿದರು.
ಈ ದೇವಾಲಯದಲ್ಲಿ ನಿತ್ಯೋತ್ಸವ, ಮಾಸೋತ್ಸವ, ಪಕ್ಷೋತ್ಸವಗಳು ನಡೆಯುತ್ತವೆ. ಶ್ರಾವಣ, ಸಂಕ್ರಾಂತಿ ಮಾಸೋತ್ಸವಗಳು ನಡೆಯಲಿವೆ. 108 ಎಡೆಸೇವೆ, ಯುಗಾದಿ ಹಬ್ಬದಲ್ಲಿ ಒಂದು ವಾರ ಕಾಲ ಬೃಹತ್ ಜಾತ್ರೆ ನಡೆಯಲಿದೆ. ಧನುರ್ಮಾಸದಲ್ಲಿ ಕೊಠಾರೋತ್ಸವ ನಡೆಯುತ್ತದೆ. ಗುಡ್ಡದ ರಂಗನಾಥಸ್ವಾಮಿ ದೇವಾಲಯದಿಂದ ಉತ್ತರಕ್ಕೆ ಶಿವಗಂಗೆ, ಪಶ್ಚಿಮಕ್ಕೆ ಹುತ್ತರಿದುರ್ಗ, ವಾಯುವ್ಯಕ್ಕೆ ಭೈರವನದುರ್ಗ, ದಕ್ಷಿಣಕ್ಕೆ ಕಲ್ಯಾದ ಬೆಟ್ಟ, ಪೂರ್ವಕ್ಕೆ ಸೋಲೂರಿನ ಯಲ್ಲಮ್ಮದೇವಿ ಗುಡ್ಡಗಳ ದೇಗುಲವಿದೆ.