ವಿಧಾನಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯು ಇದೇ 17ರಂದು ಆರಂಭಗೊಳ್ಳಲಿದೆ. ಬಾಲಕೃಷ್ಣ, ಇಕ್ಬಾಲ್ ಹುಸೇನ್ ಹಾಗೂ ಡಿ,ಕೆ. ಶಿವಕುಮಾರ್ ಈಗಾಗಲೇ ತಮ್ಮ ಕ್ಷೇತ್ರದಲ್ಲಿ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಆದರೆ ಚನ್ನಪಟ್ಟಣ ಕ್ಷೇತ್ರಕ್ಕೆ ರೇವಣ್ಣ ಇನ್ನಷ್ಟೇ ಕಾಲಿಡಬೇಕಿದೆ. ಸೀಮಿತ ಅವಧಿಯಲ್ಲಿ ಅವರು ಹೇಗೆ ಮತದಾರರನ್ನು ಓಲೈಸಲಿದ್ದಾರೆ ಎನ್ನುವ ಬಗ್ಗೆ ಕುತೂಹಲವಿದೆ.