ಮಾಗಡಿ: ಗುಮ್ಮಸಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನೂತನ ವರ್ಷದ ರಾತ್ರಿ ಕಿಡಿಗೇಡಿಗಳು ಕುಡಿದು ದಾಂದಲೆ ಮಾಡಿ, ಕುಡಿಯುವ ನೀರನ ಪೈಪ್ ಕತ್ತರಿಸಿದ್ದಾರೆ ಎಂದು ಮುಖ್ಯಶಿಕ್ಷಕ ಶಿವಕುಮಾರ್ ತಿಳಿಸಿದರು.
ಇದರಿಂದ ನೀರು ಪೋಲಾಗುತ್ತಿದೆ ಎಂದರು. ಶಾಲಾ ಆವರಣದ ತೆಂಗಿನ ಮರಗಳಲ್ಲಿ ಇದ್ದ ಎಳನೀರು ಕಿತ್ತು ಕುಡಿದು, ತೆಂಗಿನ ಮರಕ್ಕೆ ಜಖಂ ಮಾಡಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಿರುವುದಾಗಿ ಅವರು ತಿಳಿಸಿದರು.
ಪರಂಗಿಚಿಕ್ಕನ ಪಾಳ್ಯದ ಮುಖಂಡ ಶಾಂತರಾಜು, ಶಾಲೆಗೆ ಭೇಟಿ ನೀಡಿ, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.