ಸಾಗರ: ತಾಲ್ಲೂಕಿನಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದ್ದು, ಕೆಲವೆಡೆ ಹಾನಿ ಸಂಭವಿಸಿದೆ. ಯಲಗಳಲೆ ಗ್ರಾಮದ ಪರಶುರಾಮ ಅವರ ಅಡಿಕೆ ತೋಟದಲ್ಲಿನ ಗಿಡಗಳ ಮೇಲೆ ಮರ ಬಿದ್ದ ಪರಿಣಾಮ ಗಿಡಗಳು ನಾಶವಾಗಿವೆ.
ಗಿಣಿವಾರ ಗ್ರಾಮದ ಬಸವರಾಜ ಅವರ ಮನೆಯ ಗೋಡೆ ಕುಸಿದು ನಷ್ಟ ಉಂಟಾಗಿದೆ. ಜೋಗದಲ್ಲಿ ಕೃಷ್ಣಮೂರ್ತಿ ಎಂಬುವವರ ಮನೆಯ ಗೋಡೆ ಕುಸಿದಿದ್ದು ಅಲ್ಲಿನ ವಸ್ತುಗಳಿಗೆ ಹಾನಿ ಉಂಟಾಗಿದೆ.