ಪ್ರಪಂಚದಲ್ಲಿ ಎಲ್ಲದಕ್ಕಿಂತಲೂ ವೇಗವಾಗಿ ಸಂಚರಿಸುವುದು ಮನಸ್ಸು. ಮಹಾಭಾರತದ ಯಕ್ಷಪ್ರಶ್ನೆಗಳಿಗೆ ಅಂದೇ ಯುಧಿಷ್ಠರ ಉತ್ತರ ನೀಡಿದ್ದಾರೆ. ಇಂದು ರಾಕೇಟ್ ಸೇರಿ ವೇಗದ ತಂತ್ರಜ್ಞಾನಗಳು ಅಭಿವೃದ್ಧಿಯಾಗಿದ್ದರೂ, ಮನಸ್ಸಿನ ವೇಗಕ್ಕೆ ಅವು ಸಾಟಿಯಾಗುವುದೇ ಇಲ್ಲ. ರಾಘವೇಂದ್ರ ಅವರ ಕವನಗಳಲ್ಲೂ ಮನಸ್ಸಿನ ಹರಿದಾಟ ನಿರಂತರವಾಗಿದೆ. ಬುದ್ಧ, ಬಸವ, ಗಾಂಧಿ ಅವರ ಆದರ್ಶದ ಜತೆ, ಮೋದಿ, ದೇಶ ಭಕ್ತಿಯೂ ಮೂಡಿದೆ. ಬಹುತೇಕ ಕವನಗಳು ಹೊಸತನದಿಂದ ಕೂಡಿವೆ ಎಂದು ಬಣ್ಣಿಸಿದರು.