ಕಲ್ಲು ತೂರಾಟ: ಪಂಜಾಬ್ನಿಂದ ಬಂದ ಹಕ್ಕಿಪಿಕ್ಕಿ ಕ್ಯಾಂಪ್ನ ಮೂವರಿಗೆಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಹಾಗಾಗಿ, ಹಸೂಡಿ ಹಕ್ಕಿಪಿಕ್ಕಿ ಕ್ಯಾಂಪ್, ಹರಪನಹಳ್ಳಿ ಕ್ಯಾಂಪ್ಗಳನ್ನು ಸೀಲ್ಡೌನ್ ಮಾಡಲಾಗಿತ್ತು.ಈ ಸಮಯದಲ್ಲಿ ಕೆಲವರಿಗೆಅಗತ್ಯ ಆಹಾರ ಸಿಗದ ಕಾರಣ ಸೀಲ್ಡೌನ್ ಉಲ್ಲಂಘಿಸಿ ಊರಿನಿಂದ ಹೊರಗೆ ಬಂದಿದ್ದರು. ಇದನ್ನು ಗಮನಿಸಿದ ಚಿಕ್ಕಮರಡಿ ಗ್ರಾಮಸ್ಥರು ಹಲ್ಲೆಗೆ ಮುಂದಾಗಿದ್ದಾರೆ. ತಕ್ಷಣ ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.