ಶಿವಮೊಗ್ಗ:ಚುನಾವಣೆಗೆ ಉಮೇದುವಾರಿಕೆ ಬಯಸಿ ನಾಮಪತ್ರ ಸಲ್ಲಿಸಿದ್ದ ಎಲ್ಲ 14 ಅಭ್ಯರ್ಥಿಗಳ ನಾಮಪತ್ರಗಳೂ ಸ್ವೀಕೃತವಾಗಿವೆ. ನಾಮಪತ್ರ ಹಿಂದಕ್ಕೆ ಪಡೆಯಲು ಏ. 8 ಕೊನೆಯ ದಿನ. ಅಂದೇ ಮಧ್ಯಾಹ್ನ 3ಕ್ಕೆ ಕಣದಲ್ಲಿ ಉಳಿದ ಅಂತಿಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವರು.
ಅರ್ಜಿ ತಿರಸ್ಕಾರ ಮನವಿಗೆ ಸಿಗದ ಮನ್ನಣೆ: ಚಿನ್ನ ಹಾಗೂ ಜಮೀನು ಮೌಲ್ಯದಲ್ಲಿ ವ್ಯತ್ಯಾಸ ಇರುವ ಕಾರಣ ಜೆಡಿಎಸ್ ಅಭ್ಯರ್ಥಿ ಎಸ್.ಮಧು ಬಂಗಾರಪ್ಪ ಅವರ ನಾಮಪತ್ರ ತಿರಸ್ಕರಿಸುವಂತೆ ಬಿಜೆಪಿ ಕಾನೂನ ಘಟಕ ಮಾಡಿದ್ದ ಮನವಿಯನ್ನು ಜಿಲ್ಲಾ ಚುನಾವಣಾಧಿಕಾರಿ ತಿರಿಸ್ಕರಿಸಿದ್ದಾರೆ.
ಪ್ರಮಾಣ ಪತ್ರದಲ್ಲಿನ ಎಲ್ಲ ಅಂಶಗಳನ್ನೂ ಭರ್ತಿ ಮಾಡಲಾಗಿದೆಯೇ ಎಂದು ಆಯೋಗ ಪರಿಶೀಲಿಸುತ್ತದೆ. ವ್ಯತ್ಯಾಸ ಇದ್ದರೆ ಕೋರ್ಟ್ ಮೊರೆ ಹೋಗಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ಕೆ.ಎ. ದಯಾನಂದ ಸ್ಪಷ್ಟಪಡಿಸಿದ್ದಾರೆ.