‘ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ದೇಶದ ಹಲವೆಡೆ ರಸ್ತೆ, ನಗರ, ಕಟ್ಟಡಗಳ ಹೆಸರನ್ನು ಬಿಜೆಪಿ ಬದಲಾವಣೆ ಮಾಡುತ್ತಿದೆ. ಆ ಮೂಲಕ ಗುಲಾಮಗಿರಿ ಸಂಕೇತಗಳನ್ನು ನಿಧಾನವಾಗಿ ಅಳಿಸಿ
ಹಾಕಲಾಗುತ್ತಿದೆ. ದೂರವಾಣಿ ಸಂಭಾಷಣೆ ವೇಳೆ ‘ಹಲೋ’ ಬದಲು ‘ವಂದೇ ಮಾತರಂ’ ಹೇಳಲು ಆದೇಶ ಹೊರಡಿಸಲಾಗಿದೆ. ಸ್ವಾತಂತ್ರ್ಯ ಬಂದ ತಕ್ಷಣ ಈ ಕೆಲಸವನ್ನು ಕಾಂಗ್ರೆಸ್ ಮಾಡಬೇಕಿತ್ತು. ಅವರು ಮಾಡದ ಕಾರಣ ಬಿಜೆಪಿ ಈಗ ಮಾಡುತ್ತಿದೆ’ ಎಂದು ಈಶ್ವರಪ್ಪ ಹೇಳಿದರು.