ಉದ್ಘಾಟನೆ ನಂತರ ದೇವಿಯ ಮೆರವಣಿಗೆಗೆ ವಾದ್ಯಮೇಳ, ಪಟಾಕಿ ಸಿಡಿತದ ಅಬ್ಬರ, ಕಲಾ ತಂಡದ ಮೆರಗು ಸಿಕ್ಕಿದ್ದು ನೆರೆದವರ ಉತ್ಸಾಹ ಹೆಚ್ಚು ಮಾಡಿತ್ತು. ಪ್ರಮುಖ ರಸ್ತೆಯಲ್ಲಿ ಸಂಚರಿಸಿದ ಉತ್ಸವ ಬೆಳಿಗಿನ ಜಾವ ದೇವಸ್ಥಾನ ಪ್ರವೇಶ ಮಾಡಿತು. ದೇವಾಲಯ ಸಮಿತಿ ಅಧ್ಯಕ್ಷ ಸಂತೋಷ್, ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸದಸ್ಯರಾದ ಶ್ರೇಯಸ್, ಅನುಪಮ ಚನ್ನೇಶ್, ಶಶಿಕಲಾ ನಾರಾಯಣಪ್ಪ ಅವರೂ ಭಾಗವಹಿಸಿದ್ದರು.