‘ನಗರದಲ್ಲಿ ನನ್ನ ಪರ ಫ್ಲೆಕ್ಸ್ಗಳನ್ನು ಅಭಿಮಾನಿಗಳು ಹಾಕಿದ್ದಾರೆ. ಅವುಗಳಲ್ಲಿರುವ ವಿಚಾರ ಅವರ ಆಶಯ. ಶಿವಮೊಗ್ಗದಲ್ಲಿ ಶಾಂತಿ–ಸುವ್ಯವಸ್ಥೆ ಕಾಪಾಡಲು, ನೆಮ್ಮದಿ ನೆಲೆಸಲು ಈಶ್ವರಪ್ಪ ಶ್ರಮಿಸಿ ಹತೋಟಿಗೂ ತಂದಿದ್ದಾರೆ. ಅವರ ಪ್ರಯತ್ನದ ನಡುವೆಯೂ ನಗರದ ಆರೋಗ್ಯ ಕೆಲವು ರೌಡಿ ಪಡೆಗಳಿಂದ ಕೆಟ್ಟಿದೆ. ಗಲಭೆಗಳಿಂದ ಕಾರ್ಮಿಕರು– ಬಡವರು ಹತಾಶರಾಗಿದ್ದಾರೆ. ಬಹಳಷ್ಟು ವ್ಯಾಪಾರಸ್ಥರು ಸಂಕಷ್ಟ ಅನುಭವಿಸಿದ್ದಾರೆ. ನನಗೆ ಅವಕಾಶ ಕೊಟ್ಟರೆ ಎಲ್ಲರೂ ಭಯವಿಲ್ಲದೇ ಬದುಕುವ ವಾತಾವರಣ ನಿರ್ಮಿಸುವೆ’ ಎಂದರು.