ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಕೃಷಿ ಭೂಮಿಯನ್ನು ರೈತರಲ್ಲದವರೂ ಖರೀದಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಅಲ್ಲದೆ ಕೃಷಿ ಭೂಮಿಯ ಖರೀದಿಗೆ ಇದ್ದ ಆದಾಯದ ಮಿತಿಯನ್ನು ಕೂಡ ತೆಗೆದು ಹಾಕಲು ಸರ್ಕಾರ ಮುಂದಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಭಾರಿ ಶ್ರೀಮಂತರು ಮಾತ್ರ ಭೂಮಿಯ ಒಡೆಯರಾಗುವುದು ಖಚಿತ’ ಎಂದರು.