ತಂಡ ನೀಡಿದ ಅಧ್ಯಯನ ವರದಿ ಅನ್ವಯ ಬೇದೂರು ಬೆಟ್ಟದ ಅರಣ್ಯ ಪ್ರದೇಶದಲ್ಲಿ ನಿರಂತರ ಗಣಿಗಾರಿಕೆ, ರಸ್ತೆ ನಿರ್ಮಾಣ, ಭಾರಿ ವಾಹನಗಳ ಸಂಚಾರದ ಕಾರಣ ಭೂಕುಸಿತವಾಗಿದೆ. ಇದೇ ಸ್ಥಿತಿ ನಾಲ್ಕೈದು ತಿಂಗಳು ಮುಂದುವರಿದರೆ 15 ರೈತ ಕುಟುಂಬಗಳ ಮನೆಗಳು ಕೊಚ್ಚಿಹೋಗುವ, ತೋಟ-ಗದ್ದೆಗಳು ನಾಶವಾಗುವ ಪರಿಸ್ಥಿತಿ ಬರಬಹುದು ಎಂದು ಎಚ್ಚರಿಸಿದೆ. ವರದಿಯನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ವಿಪತ್ತು ಪ್ರಾಧಿಕಾರದ ಮುಖ್ಯಸ್ಥರು, ಗಣಿ ಇಲಾಖೆ ನಿರ್ದೇಶಕರು, ಅರಣ್ಯ ಇಲಾಖೆ, ಶಿವಮೊಗ್ಗ ಜಿಲ್ಲಾಧಿಕಾರಿಗೆ ನೀಡಲಾಗಿದೆ.