ಶನಿವಾರ ನಡೆದ ಸಭೆಯಲ್ಲಿ ಚರ್ಚೆ ನಡೆಸಿದ ಮುಖಂಡರು, ‘ಕಾರ್ಮಿಕ ಇಲಾಖೆ ಆದೇಶ ನಂತರ 214 ನೌಕರರಲ್ಲಿ ಈಗಾಗಲೇ ಕೆಲವರು ಬೇರೆ ಇಲಾಖೆಗೆ ನಿಯುಕ್ತಿ ಹೊಂದುವ ಮೂಲಕ ಕೆಲಸ ನಿರ್ವಹಣೆ ಮಾಡುತ್ತಿದ್ದು, ಬಾಕಿ ಉಳಿದಿರುವ ನೌಕರರಿಗೆ ಯಾವುದೇ ಸೇವಾ ಭದ್ರತೆ ಒದಗಿಸದೇ ಮುಚ್ಚುವ ಆದೇಶ ಹೊರಡಿಸಿರುವುದು ಖಂಡನೀಯ’ ಎಂದು ಹೇಳಿದರು.