ಭಕ್ತರಿಗೆ ಮೂಲಸೌಕರ್ಯದ ಸಿದ್ಧತೆ ಮಾಡಲಾಗಿದೆ. ಶರಾವತಿ ನದಿ ತೀರದಲ್ಲಿ ಪುಣ್ಯಸ್ನಾನ ಮುಗಿಸಿ ಬರುವ ಭಕ್ತರ ಕೋರಿಕೆ ಮೇರೆಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. ಉತ್ಸವ ಕಾಲದಲ್ಲಿ ಪ್ರತಿ ಸಂಜೆ ನಾಡಿನ ಬೇರೆ ಬೇರೆಡೆಯಿಂದ ಬರುವ ಭಕ್ತ ಮಂಡಲಗಳಿಂದ ವಿವಿಧ ಸಾಂಸ್ಕೃತಿಕ ಹಾಗೂ ಭಜನಾ ಕಾರ್ಯಕ್ರಮಗಳನ್ನು ನಡೆಸಲಾಗುವುದು’ ಎಂದು ತಿಳಿಸಿದರು. ಧರ್ಮದರ್ಶಿ ಮಂಡಲದ ಶಿವಾನಂದ ಪ್ರಭು, ಜಯಂತಿ.ಎಸ್.ಮಹಾಲೆ, ಅಜಿತ್ ಮಹಾಲೆ, ಪ್ರವೀಣ್ ಮಹಾಲೆ, ಮೋಹನ್.ಎಂ.ಪೈ ಇದ್ದರು.