ರಾಜ್ಯದ ನಾನಾ ಕಡೆಗಳಿಂದ ಭಕ್ತರು ಬಂದು ಸೇರುತ್ತಾರೆ. ಪ್ರತಿವರ್ಷ ಚೈತ್ರಮಾಸದ ಶುಕ್ಲಪಕ್ಷ ತ್ರಯೋದಶಿ ತಿಥೌ ಹಸ್ತ ನಕ್ಷತ್ರದಲ್ಲಿ ರಥೋತ್ಸವ ಜರುಗುತ್ತದೆ.
ನಂಜುಂಡೇಶ್ವರ ದೇವಸ್ಥಾನದ ವಿಶೇಷ ಎಂದರೆ ಯಾವುದೇ ಮನೆತನದಲ್ಲಿ ಕಷ್ಟ ಇರುವವರು ದೇವಸ್ಥಾನಕ್ಕೆ ಹರಕೆ ಮಾಡಿಕೊಂಡರೆ ಸಮಸ್ಯೆಗಳು ಪರಿಹಾರವಾಗುತ್ತವೆ ಎನ್ನುವ ನಂಬಿಕೆ ಇದೆ. ದೇವರ ಗುಗ್ಗಳ ಹೊತ್ತರೆ ಬಿಳಿ ತೊನ್ನು, ಚರ್ಮದ ಕಾಯಿಲೆಗಳು, ಕಿವಿ ಸೋರುವಿಕೆ, ಲಗ್ನ ಸುಯೋಗ, ಮಕ್ಕಳ ಫಲ ದೊರೆಯುತ್ತದೆ ಎಂಬ ಪ್ರತೀತಿ ಇದೆ. ಅಲ್ಲದೇ, ದೇವಸ್ಥಾನದಲ್ಲಿಯೇ ಇದ್ದು, ಕಟ್ಟಳೆ ಮಾಡಿದರೆ ಮಾಟ- ಮಂತ್ರದಿಂದ ದೂರಾಗಬಹುದು ಎಂಬ ನಂಬಿಕೆ ಭಕ್ತರಲ್ಲಿದೆ.