ರಿಪ್ಪನ್ಪೇಟೆ: ಹೊಂಬುಜ ಅತಿಶಯ ಕ್ಷೇತ್ರದ ಗುಡ್ಡದ ಬಸದಿಯ ಪ್ರಾಚೀನ ಕಾಲದ ಬಾಹುಬಲಿ ವಿಗ್ರಹ ಮತ್ತು ನೂತನವಾಗಿ ರಚಿಸಲ್ಪಟ್ಟ ಶಾಂತಿನಾಥ ಸ್ವಾಮಿ ವಿಗ್ರಹವನ್ನು ಸೋಮವಾರ ಮಠದ ಪೀಠಾಧಿಕಾರಿ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾಯಿತು.
ಜೈನಾಗಮ ಧಾರ್ಮಿಕ ವಿಧಿ ಪೂರ್ವಕ ತ್ರಿಕೂಟ ಜಿನಾಲಯದಲ್ಲಿ 19 ಅಡಿ ಎತ್ತರದ ಪಾರ್ಶ್ವನಾಥ ಸ್ವಾಮಿ ವಿಗ್ರಹದ ಎಡ ಭಾಗದಲ್ಲಿ ಶಾಂತಿನಾಥ ಸ್ವಾಮಿ, ಬಲಭಾಗದಲ್ಲಿ ಪ್ರಾಚೀನ ಕಾಲದ ಬಾಹುಬಲಿ ವಿಗ್ರಹವನ್ನು ಸ್ಥಾಪಿಸಲಾಗಿದೆ.
ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಆಧಿಕ ಭಕ್ತರು ಆಗಮಿಸಿದ್ದರು.