<p><strong>ತುಮಕೂರು:</strong> 'ದ್ವೇಷ ಬಿಡಿ, ದೇವರಲ್ಲಿ ಭಕ್ತಿಯಿಡಿ. ಜೊತೆಯಲ್ಲಿರುವವರನ್ನು ದ್ವೇಷಿಸಿದರೆ ಅದು ದೇವರನ್ನು ದ್ವೇಷಿಸಿದಂತೆ. ಆದ್ದರಿಂದ ಭಗವಂತನನ್ನು ಭಕ್ತಿಯಿಂದ ಆರಾಧಿಸುವುದರೊಂದಿಗೆ ಪರಸ್ಪರ ದ್ವೇಷ, ಅಸೂಯೆ, ಕಿತ್ತಾಟವನ್ನು ತೊರೆದು ಜೊತೆಯಲ್ಲಿರುವ ಭಕ್ತರನ್ನೂ ಪ್ರೀತಿ- ಭಕ್ತಿಯಿಂದ ಆದರಿಸಬೇಕು’ ಎಂದು ಉತ್ತರಾಧಿಮ ಮಠದ ಮುಖ್ಯಾಧಿಕಾರಿ ಅನಂತಾಚಾರ್ಯ ಗೋದಾವರಿ ಹೇಳಿದರು.</p>.<p>ಅಖಿಲಭಾರತ ಮಾಧ್ವ ಮಹಾಮಂಡಳಿಯ ವತಿಯಿಂದ ನಗರದ ಚಿಕ್ಕಪೇಟೆಯ ಉತ್ತರಾದಿ ಮಠದಲ್ಲಿ ನಡೆದ ಮಧ್ವ ನವಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಪ್ರತಿಯೊಬ್ಬರೂ ತಮ್ಮ ಆಚಾರ-ವಿಚಾರ, ಸಂಪ್ರದಾಯ, ಸಂಸ್ಕೃತಿಯನ್ನು ಪ್ರಾಮಾಣಿಕವಾಗಿ ಆಚರಿಸಬೇಕು ಹಾಗೂ ಅನುಸರಿಸಬೇಕು. ಅದರೊಂದಿಗೆ ಸಮಾಜದಲ್ಲಿ ಸಾಮರಸ್ಯ ಮೂಡುವಂತೆ ಶ್ರಮಿಸಬೇಕು ಎಂದು ಹೇಳಿದರು.</p>.<p>‘ಶ್ರೀಕೃಷ್ಣ ಮಧ್ವಾನುಗ್ರಹ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ಹಿರಿಯ ಸಂಸ್ಕೃತ ವಿದ್ವಾಂಸ ಜಯತೀರ್ಥಾಚಾರ್ಯ, ‘ಯತಿಶ್ರೇಷ್ಠ ಮಧ್ವಾಚಾರ್ಯರು ವೇದ, ಉಪನಿಷತ್ತು, ಪುರಾಣಗಳಿಗೆ ಭಾಷ್ಯ ಬರೆದರು. ತಮ್ಮ ತತ್ವ-ಸಿದ್ಧಾಂತಗಳನ್ನು ಅತ್ಯಂತ ವೈಜ್ಞಾನಿಕವಾಗಿ ಹಾಗೂ ಅರ್ಥಪೂರ್ಣವಾಗಿ ಪ್ರಸ್ತುತಪಡಿಸಿದರು. ಮಧ್ವರ ಸಿದ್ಧಾಂತಗಳು ಪ್ರಸ್ತುತ ಹೆಚ್ಚು ಅವಶ್ಯಕವಾಗಿವೆ’ ಎಂದು ಹೇಳಿದರು.</p>.<p>ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಸ್ಕೃತ ಕಲಿಕೆ ಹಾಗೂ ವೇದೋಪನಿಷತ್ತುಗಳ ಕಲಿಕೆ ಅತ್ಯಗತ್ಯ. ಇದರಿಂದ ಅವರ ಭವಿಷ್ಯದ ಜೀವನ ಅತ್ಯುತ್ತಮವಾಗಲಿದೆ. ಈ ನಿಟ್ಟಿನಲ್ಲಿ ತಾವು ಹಲವು ವರ್ಷಗಳಿಂದ ನೂರಾರು ವಿದ್ಯಾರ್ಥಿಗಳಿಗೆ ಸಂಸ್ಕೃತ, ವೇದಗಳನ್ನು ಕಲಿಸುತ್ತಿರುವುದಾಗಿ ತಿಳಿಸಿದರು.</p>.<p>ಮಹಾನಗರ ಪಾಲಿಕೆ ಸದಸ್ಯ ಎನ್.ಆರ್.ನಾಗರಾಜರಾವ್, ಮಹಾಮಂಡಲದ ತುಮಕೂರು ಶಾಖೆ ಗೌರವ ಅಧ್ಯಕ್ಷ ಗೋಪಾಲಕೃಷ್ಣರಾವ್, ಶ್ರೀಕೃಷ್ಣ ಮಂದಿರದ ಅಧ್ಯಕ್ಷರಾದ ಶ್ರೀನಿವಾಸ ಹತ್ವಾರ್, ಪ್ರಾಧ್ಯಾಪಕ ಪ್ರೊ.ವೇಣುಗೋಪಾಲ್ ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಭಜನಾ ತಂಡಗಳೊಂದಿಗೆ ಚಿಕ್ಕಪೇಟೆಯ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಯಿತು.</p>.<p><strong>ಶೀಘ್ರ ಮಾಧ್ವ ಸಮ್ಮೇಳನ</strong></p>.<p>ಅಖಿಲ ಭಾರತ ಮಾಧ್ವ ಮಹಾಮಂಡಲದ ತುಮಕೂರು ಶಾಖೆಯ ಅಧ್ಯಕ್ಷ ಜಿ.ಕೆ.ಶ್ರೀನಿವಾಸ್ ಅವರು ಮಾತನಾಡಿ, ‘ನಮ್ಮ ಸಂಸ್ಕೃತಿ-ಪರಂಪರೆಗಳ ಬಗ್ಗೆ ಹಾಗೂ ಮಧ್ವಾಚಾರ್ಯರ ತತ್ವ-ಸಿದ್ಧಾಂತಗಳನ್ನು ಜನಸಾಮಾನ್ಯರಿಗೂ ಪ್ರಚುರ ಪಡಿಸಲು ನಿಯಮಿತವಾಗಿ ಪ್ರವಚನ, ಉಪನ್ಯಾಸ ಕಾರ್ಯಕ್ರಮಗಳನ್ನು ಈಗಾಗಲೇ ಹಮ್ಮಿಕೊಳ್ಳಲಾಗಿದೆ. ಇದರ ಮುಂದುವರೆದ ಭಾಗವಾಗಿ ಅತಿ ಶೀಘ್ರದಲ್ಲಿ ಮಾಧ್ವ ಸಮ್ಮೇಳನವನ್ನು ಆಯೋಜಿಸಲಾಗುವುದು. ಇದಕ್ಕಾಗಿ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> 'ದ್ವೇಷ ಬಿಡಿ, ದೇವರಲ್ಲಿ ಭಕ್ತಿಯಿಡಿ. ಜೊತೆಯಲ್ಲಿರುವವರನ್ನು ದ್ವೇಷಿಸಿದರೆ ಅದು ದೇವರನ್ನು ದ್ವೇಷಿಸಿದಂತೆ. ಆದ್ದರಿಂದ ಭಗವಂತನನ್ನು ಭಕ್ತಿಯಿಂದ ಆರಾಧಿಸುವುದರೊಂದಿಗೆ ಪರಸ್ಪರ ದ್ವೇಷ, ಅಸೂಯೆ, ಕಿತ್ತಾಟವನ್ನು ತೊರೆದು ಜೊತೆಯಲ್ಲಿರುವ ಭಕ್ತರನ್ನೂ ಪ್ರೀತಿ- ಭಕ್ತಿಯಿಂದ ಆದರಿಸಬೇಕು’ ಎಂದು ಉತ್ತರಾಧಿಮ ಮಠದ ಮುಖ್ಯಾಧಿಕಾರಿ ಅನಂತಾಚಾರ್ಯ ಗೋದಾವರಿ ಹೇಳಿದರು.</p>.<p>ಅಖಿಲಭಾರತ ಮಾಧ್ವ ಮಹಾಮಂಡಳಿಯ ವತಿಯಿಂದ ನಗರದ ಚಿಕ್ಕಪೇಟೆಯ ಉತ್ತರಾದಿ ಮಠದಲ್ಲಿ ನಡೆದ ಮಧ್ವ ನವಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಪ್ರತಿಯೊಬ್ಬರೂ ತಮ್ಮ ಆಚಾರ-ವಿಚಾರ, ಸಂಪ್ರದಾಯ, ಸಂಸ್ಕೃತಿಯನ್ನು ಪ್ರಾಮಾಣಿಕವಾಗಿ ಆಚರಿಸಬೇಕು ಹಾಗೂ ಅನುಸರಿಸಬೇಕು. ಅದರೊಂದಿಗೆ ಸಮಾಜದಲ್ಲಿ ಸಾಮರಸ್ಯ ಮೂಡುವಂತೆ ಶ್ರಮಿಸಬೇಕು ಎಂದು ಹೇಳಿದರು.</p>.<p>‘ಶ್ರೀಕೃಷ್ಣ ಮಧ್ವಾನುಗ್ರಹ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ಹಿರಿಯ ಸಂಸ್ಕೃತ ವಿದ್ವಾಂಸ ಜಯತೀರ್ಥಾಚಾರ್ಯ, ‘ಯತಿಶ್ರೇಷ್ಠ ಮಧ್ವಾಚಾರ್ಯರು ವೇದ, ಉಪನಿಷತ್ತು, ಪುರಾಣಗಳಿಗೆ ಭಾಷ್ಯ ಬರೆದರು. ತಮ್ಮ ತತ್ವ-ಸಿದ್ಧಾಂತಗಳನ್ನು ಅತ್ಯಂತ ವೈಜ್ಞಾನಿಕವಾಗಿ ಹಾಗೂ ಅರ್ಥಪೂರ್ಣವಾಗಿ ಪ್ರಸ್ತುತಪಡಿಸಿದರು. ಮಧ್ವರ ಸಿದ್ಧಾಂತಗಳು ಪ್ರಸ್ತುತ ಹೆಚ್ಚು ಅವಶ್ಯಕವಾಗಿವೆ’ ಎಂದು ಹೇಳಿದರು.</p>.<p>ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಸ್ಕೃತ ಕಲಿಕೆ ಹಾಗೂ ವೇದೋಪನಿಷತ್ತುಗಳ ಕಲಿಕೆ ಅತ್ಯಗತ್ಯ. ಇದರಿಂದ ಅವರ ಭವಿಷ್ಯದ ಜೀವನ ಅತ್ಯುತ್ತಮವಾಗಲಿದೆ. ಈ ನಿಟ್ಟಿನಲ್ಲಿ ತಾವು ಹಲವು ವರ್ಷಗಳಿಂದ ನೂರಾರು ವಿದ್ಯಾರ್ಥಿಗಳಿಗೆ ಸಂಸ್ಕೃತ, ವೇದಗಳನ್ನು ಕಲಿಸುತ್ತಿರುವುದಾಗಿ ತಿಳಿಸಿದರು.</p>.<p>ಮಹಾನಗರ ಪಾಲಿಕೆ ಸದಸ್ಯ ಎನ್.ಆರ್.ನಾಗರಾಜರಾವ್, ಮಹಾಮಂಡಲದ ತುಮಕೂರು ಶಾಖೆ ಗೌರವ ಅಧ್ಯಕ್ಷ ಗೋಪಾಲಕೃಷ್ಣರಾವ್, ಶ್ರೀಕೃಷ್ಣ ಮಂದಿರದ ಅಧ್ಯಕ್ಷರಾದ ಶ್ರೀನಿವಾಸ ಹತ್ವಾರ್, ಪ್ರಾಧ್ಯಾಪಕ ಪ್ರೊ.ವೇಣುಗೋಪಾಲ್ ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಭಜನಾ ತಂಡಗಳೊಂದಿಗೆ ಚಿಕ್ಕಪೇಟೆಯ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಯಿತು.</p>.<p><strong>ಶೀಘ್ರ ಮಾಧ್ವ ಸಮ್ಮೇಳನ</strong></p>.<p>ಅಖಿಲ ಭಾರತ ಮಾಧ್ವ ಮಹಾಮಂಡಲದ ತುಮಕೂರು ಶಾಖೆಯ ಅಧ್ಯಕ್ಷ ಜಿ.ಕೆ.ಶ್ರೀನಿವಾಸ್ ಅವರು ಮಾತನಾಡಿ, ‘ನಮ್ಮ ಸಂಸ್ಕೃತಿ-ಪರಂಪರೆಗಳ ಬಗ್ಗೆ ಹಾಗೂ ಮಧ್ವಾಚಾರ್ಯರ ತತ್ವ-ಸಿದ್ಧಾಂತಗಳನ್ನು ಜನಸಾಮಾನ್ಯರಿಗೂ ಪ್ರಚುರ ಪಡಿಸಲು ನಿಯಮಿತವಾಗಿ ಪ್ರವಚನ, ಉಪನ್ಯಾಸ ಕಾರ್ಯಕ್ರಮಗಳನ್ನು ಈಗಾಗಲೇ ಹಮ್ಮಿಕೊಳ್ಳಲಾಗಿದೆ. ಇದರ ಮುಂದುವರೆದ ಭಾಗವಾಗಿ ಅತಿ ಶೀಘ್ರದಲ್ಲಿ ಮಾಧ್ವ ಸಮ್ಮೇಳನವನ್ನು ಆಯೋಜಿಸಲಾಗುವುದು. ಇದಕ್ಕಾಗಿ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>