ತಾಲ್ಲೂಕಿನಲ್ಲಿ ಭತ್ತ, ರಾಗಿ ನಂತರ ಕಬ್ಬನ್ನು ಹೆಚ್ಚಾಗಿ ಬೆಳೆಯುತ್ತಿದ್ದರು. ಆದರೆ ಸರ್ಕಾರ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸುತ್ತಿರುವುದರಿಂದ ರಾಗಿ ಬೆಳೆಯಲು ಒಲವು ತೋರಿದ್ದಾರೆ. ಮಾರ್ಕೋನಹಳ್ಳಿ, ಮಂಗಳಾ ಜಲಾಶಯಗಳ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಲಭ್ಯತೆ, ಉಳಿತಾಯ, ಅಂತರ್ಜಲ ಸ್ಥಿರತೆಗಾಗಿ ಅಧಿಕಾರಿಗಳ ಮನವಿ ಮತ್ತು ಸೂಚನೆ ಮೇರೆಗೆ ಅನೇಕರು ಭತ್ತವನ್ನು ಬದಿಗಿಟ್ಟು ರಾಗಿಯತ್ತ ಚಿತ್ತ ನೆಟ್ಟಿದ್ದಾರೆ. ಆದರೂ ಸಾಂಪ್ರದಾಯಿಕವಾಗಿ ಭತ್ತ ಬೆಳೆಯುತ್ತಿದ್ದವರು ಅದನ್ನೇ ಮುಂದುವರೆಸಿದ್ದಾರೆ.