ಪ್ರಕರಣದ ಜಾಡು ಹಿಡಿದ ಪೊಲೀಸರು ಮೂವರು ಕಳ್ಳರನ್ನು ಬಂಧಿಸಿದ್ದಾರೆ. ₹4.60 ಲಕ್ಷ ಮೌಲ್ಯದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಸಿಪಿಐ ರಾಮಪ್ರಸಾದ್, ಪಿಎಸ್ಐಗಳಾದ ಜಿ.ಎಸ್.ಭೈರೇಗೌಡ, ಕೃಷ್ಣಮೂರ್ತಿ, ಸಿಬ್ಬಂದಿಯಾದ ಕೆ.ರಾಜಣ್ಣ, ರಮೇಶ್ ಹನುಮರಂಗಯ್ಯ, ಸೈಯದ್ ಇರ್ಫಾತ್ ಅಲಿ, ಕಿರಣ್ ಬಸವರಾಜು, ಸಂತೋಷ್, ವಿರೂಪಾಕ್ಷ, ಕಿಶೋರ್, ಸುರೇಶ್ ಅವರು ಕಾರ್ಯಾಚಾರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ತಿಳಿಸಿದ್ದಾರೆ.