ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರು ಡಿಕ್ಕಿ; ಮುರಿದ ವಿದ್ಯುತ್ ಕಂಬ

Last Updated 16 ಅಕ್ಟೋಬರ್ 2019, 12:37 IST
ಅಕ್ಷರ ಗಾತ್ರ

ಹುಲಿಯೂರುದುರ್ಗ: ರಸ್ತೆಯ ಉಬ್ಬು ಗಮನಿಸದೆ ವೇಗವಾಗಿ ಹೋಗುತ್ತಿದ್ದ ಕಾರು ಬುಧವಾರ ಹಳೇವೂರಿನಲ್ಲಿ ಮೇಲಕ್ಕೆ ಜಿಗಿದಾಗ ಒಳಗಿದ್ದವರು ಗಾಯಗೊಂಡರು.

ಹಳೇವೂರಿನ ಹುಲಿಯೂರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಚನ್ನಪಟ್ಟಣದ ಒಂದು ಕುಟುಂಬದ ಸದಸ್ಯರು ಯಡಿಯೂರಿನತ್ತ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದೆ.

ಕಾರು ಮೇಲಕ್ಕೆ ಜಿಗಿದಾಗ ಕಾರಿನಲ್ಲೆ ಕೆಳಕ್ಕುರುಳಿ ಬಿದ್ದ ಮಗುವಿನತ್ತ ಆತಂಕದಿಂದ ಹಿಂತಿರುಗಿ ನೋಡಿದ ಚಾಲಕ ಸ್ಟೇರಿಂಗ್ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾರೆ. ಬ್ರೇಕ್ ಒತ್ತಿ ಕಾರಿನ ವೇಗ ತಗ್ಗಿಸುವ ಬದಲಾಗಿ ಎಕ್ಸಲೇಟರ್ ತುಳಿದು ಅಡ್ಡಾದಿಡ್ಡಿಯಾಗಿ ನುಗ್ಗಿದ ಕಾರು ರಸ್ತೆ ಬದಿಯ ಕಂಬಕ್ಕೆ ಗುದ್ದಿದೆ. ನೆಲಮಟ್ಟದಲ್ಲಿ ತುಂಡಾಗಿರುವ ಕಂಬ ಆರು ಅಡಿಗಳಷ್ಟು ದೂರಕ್ಕೆ ಎಸೆಯಲ್ಪಟ್ಟಿದೆ.

‘ಕಾರ್‌ನ ಬಂಪರ್ ಮದ್ಯ ಭಾಗಕ್ಕೆ ಕಂಬ ಅಪ್ಪಳಿಸಿರುವುದರಿಂದ ಹೆಚ್ಚಿನ ಅಪಾಯವಾಗುವುದು ತಪ್ಪಿದೆ. ವಿದ್ಯುತ್ ಕಂಬದ ಮೇಲಿನ ಪ್ರದಾನ ವಾಹಕ ತಂತಿ ತುಂಡಾಗಿ ಕಾರಿನ ಮೇಲಾಗಲಿ, ಮನೆಯ ಮೇಲಾಗಲಿ ಬಿದ್ದಿದ್ದರೂ ಹೆಚ್ಚಿನ ಅನಾಹುತವಾಗುತ್ತಿತ್ತು’ ಎಂದು ಪ್ರತ್ಯಕ್ಷದರ್ಶಿ ರಮೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT