ಬಳಿಕ ಮಾತನಾಡಿದ ಅವರು, ‘ಜಾನುವಾರುಗಳಲ್ಲಿ ಯಾವುದೇ ರೋಗದ ಲಕ್ಷಣಗಳು ಕಾಣಿಸುತ್ತಿಲ್ಲ. ಮೇವಿನ ವ್ಯತ್ಯಾಸದಿಂದ ಅಥವಾ ಅಜೀರ್ಣದಿಂದ ಮೃತಪಟ್ಟಿರುವ ಸಾಧ್ಯತೆಗಳಿವೆ. ಸತ್ತಿರುವ ಜಾನುವಾರುಗಳ ಶವಪರೀಕ್ಷೆ ಮಾಡಲಾಗಿದೆ. ಜಾನುವಾರುಗಳ ಅಂಗಾಂಗಗಳ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಅಲ್ಲಿಂದ ವರದಿ ಬಂದ ತಕ್ಷಣ ಸತ್ಯಾಂಶ ಗೊತ್ತಾಗಲಿದೆ ಎಂದು ಹೇಳಿದರು.