‘ಮಳಿಗೆ ಮಾಲೀಕರು ಮಕ್ಕಳ ಮಾಹಿತಿ ನೀಡಲು ನಿಕಾರಿಸಿದರು. ಅವರನ್ನು ಬಾಲ ಮಂದಿರಕ್ಕೆ ಸೇರಿಸಲು ಆಟೊದಲ್ಲಿ ಕರೆದುಕೊಂಡು ಹೋಗುತ್ತಿದ್ದೆ. ಈ ವೇಳೆ ಎಸ್.ಎ.ಬ್ರಿಡಾಲ್ ಕ್ರಿಯೇಷನ್ ಮಳಿಗೆ ಮತ್ತು ಸುತ್ತಮುತ್ತಲಿನ ಅಂಗಡಿಯವರು ಮಕ್ಕಳನ್ನು ಆಟೊದಿಂದ ಎಳೆದು ನಮ್ಮಿಂದ ಬಲವಂತವಾಗಿ ಬಿಡಿಸಿದರು. ಅವರು ಓಡಿ ಹೋಗುವಂತೆ ಮಾಡಿದ್ದಾರೆ. ಮಕ್ಕಳು ಕೆಲಸ ಮಾಡುತ್ತಿರುವ ಮಳಿಗೆಯ ಮಾಲೀಕರ ವಿರುದ್ಧ ಕ್ರಮಕೈಗೊಳ್ಳುವಂತೆ ಕೋರಿ ನಾಗಭೂಷಣ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.