ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತೆಂಗು ಬೆಳೆಗಾರರೂ ಶೋಷಣೆಗೆ ಒಳಗಾಗಿದ್ದಾರೆ. ಯಾವುದೇ ಸರ್ಕಾರ ಬಂದರೂ ತೆಂಗು ಬೆಳೆಗಾರರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಒಂದು ಕ್ವಿಂಟಲ್ ಕೊಬ್ಬರಿ ಬೆಳೆಯಲು ₹ 20,000 ಅಗತ್ಯವಿದೆ ಎಂದು ಕೃಷಿ ತಜ್ಞರು ವೈಜ್ಞಾನಿಕವಾಗಿ ದೃಡಪಡಿಸಿದ್ದಾರೆ. ಕೇವಲ ₹ 9,000 ನಿಗದಿಯಾದರೆ ಕಷ್ಟ. ₹ 20,000 ನಿಗದಿಪಡಿಸಿ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.