ರಾಜಣ್ಣ ಅವರ ರಾಜಕೀಯ ಏಳಿಗೆ ಸಹಿಸದೆ 2015ರಲ್ಲಿ ಲಕ್ಷ್ಮಯ್ಯ, ಆತನ ಮಕ್ಕಳಾದ ರವಿ, ನಿಜಲಿಂಗಪ್ಪ ಹಾಗೂ ಆತನ ತಮ್ಮ ಸಿದ್ಧಲಿಂಗಪ್ಪ ಕೊಲೆ ಸಂಚು ರೂಪಿಸಿದ್ದರು. ವೀರಣ್ಣನಹಳ್ಳಿ ಸಮುದಾಯದ ಮುಂಭಾಗ ಮಚ್ಚಿನಿಂದ ಹಲ್ಲೆ ನಡೆಸಿದ್ದರು. ರಾಜಣ್ಣ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಬಡವನಹಳ್ಳಿ ಪೊಲೀಸರು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.