<p><strong>ತುಮಕೂರು:</strong> ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 600ರ ಗಡಿ ದಾಟಿದೆ. ಗುರುವಾರ ಮತ್ತೆ 15 ಮಂದಿಗೆ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 612ಕ್ಕೆ ಮುಟ್ಟಿದ್ದು, ಬುಧವಾರ ಮತ್ತೊಬ್ಬರು ಮೃತಪಟ್ಟಿದ್ದು ಸಾವಿನ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.</p>.<p>ಗುಬ್ಬಿ ತಾಲ್ಲೂಕಿನ ಯಲಚಿಹಳ್ಳಿಯ 72 ವರ್ಷದ ವ್ಯಕ್ತಿ ಬುಧವಾರ ಕೊರೊನಾದಿಂದ ಮೃತಪಟ್ಟಿದ್ದಾರೆ. ಇವರು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜು.14ರಂದು ಇವರ ಗಂಟಲು ಸ್ರಾವ ಮಾದರಿ ಪಡೆಯಲಾಗಿತ್ತು. ಈ ನಡುವೆ ಗುಬ್ಬಿಗೆ ಇವರು ಮರಳಿದ್ದರು.</p>.<p>ತುಮಕೂರು ನಗರದಲ್ಲಿ ಮತ್ತೆ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಲೇ ಇವೆ. ಗುರುವಾರವೂ 12 ಮಂದಿಗೆ ಸೋಂಕು ದೃಢವಾಗಿದೆ. ಹೀಗೆ ಪ್ರತಿ ದಿನವೂ ಜಿಲ್ಲೆಯಲ್ಲಿ ವರದಿಯಾಗುತ್ತಿರುವ ಸೋಂಕಿತರಲ್ಲಿ ತುಮಕೂರು ನಗರದಲ್ಲಿಯೇ ಹೆಚ್ಚು ಮಂದಿ ಇದ್ದಾರೆ ಎಂಬುದು ವಿಶೇಷ.</p>.<p>ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಐದು ಮಂದಿ ಗುರುವಾರ ಗುಣಮುಖರಾಗಿ ಬಿಡುಗಡೆಯಾದರು. ಇಲ್ಲಿಯವರೆಗೂ ಕೊರೊನಾ ಸೋಂಕಿತ 222 ಮಂದಿ ಗುಣಮುಖರಾಗಿದ್ದಾರೆ. 372 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿ ಇವೆ.</p>.<p>ತುಮಕೂರಿನಲ್ಲಿ ಎಲ್ಲೆಲ್ಲೆ ಸೋಂಕಿತರು: ನಗರದ ಎಸ್ಐಟಿ, ಮಹಾಲಕ್ಷ್ಮಿನಗರ, ವಿನಾಯಕನಗರ, ಮಾರುತಿನಗರ, ಶ್ರೀನಗರ, ಪಿ.ಎಚ್.ಕಾಲೊನಿ, ತುಮಕೂರು ತಾಲ್ಲೂಕಿನ ಕಲ್ಕೆರೆ, ಮಲ್ಲಸಂದ್ರದಲ್ಲಿ ಗುರುವಾರ ಸೋಂಕಿತರು ಇದ್ದಾರೆ. ದಿನದಿಂದ ದಿನಕ್ಕೆ ನಗರದ ಬೇರೆ ಬೇರೆ ಭಾಗಗಳಲ್ಲಿ ಸೋಂಕಿನ ಪ್ರಕರಣಗಳು ಕಂಡು ಬರುತ್ತಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 600ರ ಗಡಿ ದಾಟಿದೆ. ಗುರುವಾರ ಮತ್ತೆ 15 ಮಂದಿಗೆ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 612ಕ್ಕೆ ಮುಟ್ಟಿದ್ದು, ಬುಧವಾರ ಮತ್ತೊಬ್ಬರು ಮೃತಪಟ್ಟಿದ್ದು ಸಾವಿನ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.</p>.<p>ಗುಬ್ಬಿ ತಾಲ್ಲೂಕಿನ ಯಲಚಿಹಳ್ಳಿಯ 72 ವರ್ಷದ ವ್ಯಕ್ತಿ ಬುಧವಾರ ಕೊರೊನಾದಿಂದ ಮೃತಪಟ್ಟಿದ್ದಾರೆ. ಇವರು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜು.14ರಂದು ಇವರ ಗಂಟಲು ಸ್ರಾವ ಮಾದರಿ ಪಡೆಯಲಾಗಿತ್ತು. ಈ ನಡುವೆ ಗುಬ್ಬಿಗೆ ಇವರು ಮರಳಿದ್ದರು.</p>.<p>ತುಮಕೂರು ನಗರದಲ್ಲಿ ಮತ್ತೆ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಲೇ ಇವೆ. ಗುರುವಾರವೂ 12 ಮಂದಿಗೆ ಸೋಂಕು ದೃಢವಾಗಿದೆ. ಹೀಗೆ ಪ್ರತಿ ದಿನವೂ ಜಿಲ್ಲೆಯಲ್ಲಿ ವರದಿಯಾಗುತ್ತಿರುವ ಸೋಂಕಿತರಲ್ಲಿ ತುಮಕೂರು ನಗರದಲ್ಲಿಯೇ ಹೆಚ್ಚು ಮಂದಿ ಇದ್ದಾರೆ ಎಂಬುದು ವಿಶೇಷ.</p>.<p>ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಐದು ಮಂದಿ ಗುರುವಾರ ಗುಣಮುಖರಾಗಿ ಬಿಡುಗಡೆಯಾದರು. ಇಲ್ಲಿಯವರೆಗೂ ಕೊರೊನಾ ಸೋಂಕಿತ 222 ಮಂದಿ ಗುಣಮುಖರಾಗಿದ್ದಾರೆ. 372 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿ ಇವೆ.</p>.<p>ತುಮಕೂರಿನಲ್ಲಿ ಎಲ್ಲೆಲ್ಲೆ ಸೋಂಕಿತರು: ನಗರದ ಎಸ್ಐಟಿ, ಮಹಾಲಕ್ಷ್ಮಿನಗರ, ವಿನಾಯಕನಗರ, ಮಾರುತಿನಗರ, ಶ್ರೀನಗರ, ಪಿ.ಎಚ್.ಕಾಲೊನಿ, ತುಮಕೂರು ತಾಲ್ಲೂಕಿನ ಕಲ್ಕೆರೆ, ಮಲ್ಲಸಂದ್ರದಲ್ಲಿ ಗುರುವಾರ ಸೋಂಕಿತರು ಇದ್ದಾರೆ. ದಿನದಿಂದ ದಿನಕ್ಕೆ ನಗರದ ಬೇರೆ ಬೇರೆ ಭಾಗಗಳಲ್ಲಿ ಸೋಂಕಿನ ಪ್ರಕರಣಗಳು ಕಂಡು ಬರುತ್ತಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>