<p><strong>ತುಮಕೂರು:</strong> ದೇವರಾಯನದುರ್ಗದ ಯೋಗ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದಲ್ಲಿ ಶನಿವಾರ ಧಾರ್ಮಿಕ ಆಚರಣೆಗಳ ಕಲರವವೇ ಮೇಳೈಸಿತ್ತು. ಮಂತ್ರಾಲಯ ಮಠದ ಸುಭುದೇಂದ್ರ ತೀರ್ಥ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಡೆದ ಕುಂಭಾಭಿಷೇಕಕ್ಕೆ ಭಕ್ತಗಣವೇ ಹರಿದು ಬಂದಿತ್ತು.</p>.<p>ಶನಿವಾರ ಬೆಳಿಗ್ಗೆ ನಡೆದ ಕಲಶಾರಾಧನೆ, ಪ್ರಧಾನ ಹೋಮಗಳು, ಪೂರ್ಣಾಹುತಿಗೆ ಭಕ್ತರು ಸಾಕ್ಷಿಯಾದರು. ಬಳಿಕ ನೆರವೇರಿದ ವಿಮಾನಗೋಪುರ ಮತ್ತು ರಾಜಗೋಪುರ ಕುಂಭಾಭಿಷೇಕ, ಬಲಿಪ್ರಧಾನ, ಮಹಾನಿವೇದನೆ, ಮಹಾಮಂಗಳಾರತಿಯಲ್ಲೂ ಜನರು ಪಾಲ್ಗೊಂಡರು.</p>.<p>ರಾಘವೇಂದ್ರ ಸ್ವಾಮೀಜಿ ಸೇರಿದಂತೆ ಮಂತ್ರಾಲಯದ ಪೀಠಾಧಿಪತಿಗಳು ದೇವರಾಯನದುರ್ಗದ ಕರಿಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದ ಉಲ್ಲೇಖ ಮಠದ ಇತಿಹಾಸದಲ್ಲಿ ಇದೆ ಎಂದು ಸುಭುದೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದರು.</p>.<p>ದೇವಾಲಯದ ಕಾರ್ಯನಿರ್ವಾಹಣಾಧಿಕಾರಿ ಎಚ್.ಸವಿತಾ, ಧಾರ್ಮಿಕ ಕಾರ್ಯಗಳು ಸುಸೂತ್ರವಾಗಿ ನಡೆದವು. ವಾಸ್ತು ಆರಾಧನೆ, ಕಳಸ ಸ್ಥಾಪನ ಮಹಾನಿವೇದನ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಅಚ್ಚುಕಟ್ಟಾಗಿ ನಡೆದವು ಎಂದು ತಿಳಿಸಿದರು.</p>.<p>ತಹಶೀಲ್ದಾರ್ ಮೋಹನ್, ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಊರ್ಡಿಗೆರೆ ಕರಿಗಿರಿಯಪ್ಪ, ಅರ್ಚಕರಾದ ಡಿ.ಎನ್.ನರಸಿಂಹಭಟ್ಟ, ಆಗಮಿಕ ವಾಸುದೇವಭಟ್ಟ, ಪ್ರಧಾನ ಅರ್ಚಕರಾದ ವೆಂಕಟರಾಜು ಭಟ್ಟ, ಡಿ.ಕೆ.ಲಕ್ಷ್ಮಿನಾರಾಯಣಭಟ್ಟ, ಕಂದಾಯಾಧಿಕಾರಿ ಪಿ.ಶಿವಣ್ಣ, ವ್ಯವಸ್ಥಾಪನ ಸಮಿತಿ ಸದಸ್ಯರು ಹಾಗೂ ದೇಗುಲ ಅಭಿವೃದ್ಧಿ ಮಂಡಳಿ ಸದಸ್ಯರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ದೇವರಾಯನದುರ್ಗದ ಯೋಗ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದಲ್ಲಿ ಶನಿವಾರ ಧಾರ್ಮಿಕ ಆಚರಣೆಗಳ ಕಲರವವೇ ಮೇಳೈಸಿತ್ತು. ಮಂತ್ರಾಲಯ ಮಠದ ಸುಭುದೇಂದ್ರ ತೀರ್ಥ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಡೆದ ಕುಂಭಾಭಿಷೇಕಕ್ಕೆ ಭಕ್ತಗಣವೇ ಹರಿದು ಬಂದಿತ್ತು.</p>.<p>ಶನಿವಾರ ಬೆಳಿಗ್ಗೆ ನಡೆದ ಕಲಶಾರಾಧನೆ, ಪ್ರಧಾನ ಹೋಮಗಳು, ಪೂರ್ಣಾಹುತಿಗೆ ಭಕ್ತರು ಸಾಕ್ಷಿಯಾದರು. ಬಳಿಕ ನೆರವೇರಿದ ವಿಮಾನಗೋಪುರ ಮತ್ತು ರಾಜಗೋಪುರ ಕುಂಭಾಭಿಷೇಕ, ಬಲಿಪ್ರಧಾನ, ಮಹಾನಿವೇದನೆ, ಮಹಾಮಂಗಳಾರತಿಯಲ್ಲೂ ಜನರು ಪಾಲ್ಗೊಂಡರು.</p>.<p>ರಾಘವೇಂದ್ರ ಸ್ವಾಮೀಜಿ ಸೇರಿದಂತೆ ಮಂತ್ರಾಲಯದ ಪೀಠಾಧಿಪತಿಗಳು ದೇವರಾಯನದುರ್ಗದ ಕರಿಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದ ಉಲ್ಲೇಖ ಮಠದ ಇತಿಹಾಸದಲ್ಲಿ ಇದೆ ಎಂದು ಸುಭುದೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದರು.</p>.<p>ದೇವಾಲಯದ ಕಾರ್ಯನಿರ್ವಾಹಣಾಧಿಕಾರಿ ಎಚ್.ಸವಿತಾ, ಧಾರ್ಮಿಕ ಕಾರ್ಯಗಳು ಸುಸೂತ್ರವಾಗಿ ನಡೆದವು. ವಾಸ್ತು ಆರಾಧನೆ, ಕಳಸ ಸ್ಥಾಪನ ಮಹಾನಿವೇದನ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಅಚ್ಚುಕಟ್ಟಾಗಿ ನಡೆದವು ಎಂದು ತಿಳಿಸಿದರು.</p>.<p>ತಹಶೀಲ್ದಾರ್ ಮೋಹನ್, ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಊರ್ಡಿಗೆರೆ ಕರಿಗಿರಿಯಪ್ಪ, ಅರ್ಚಕರಾದ ಡಿ.ಎನ್.ನರಸಿಂಹಭಟ್ಟ, ಆಗಮಿಕ ವಾಸುದೇವಭಟ್ಟ, ಪ್ರಧಾನ ಅರ್ಚಕರಾದ ವೆಂಕಟರಾಜು ಭಟ್ಟ, ಡಿ.ಕೆ.ಲಕ್ಷ್ಮಿನಾರಾಯಣಭಟ್ಟ, ಕಂದಾಯಾಧಿಕಾರಿ ಪಿ.ಶಿವಣ್ಣ, ವ್ಯವಸ್ಥಾಪನ ಸಮಿತಿ ಸದಸ್ಯರು ಹಾಗೂ ದೇಗುಲ ಅಭಿವೃದ್ಧಿ ಮಂಡಳಿ ಸದಸ್ಯರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>