ಬಿಪಿಎಸ್ ಜಿಲ್ಲಾ ಘಟಕದ ಪದಾಧಿಕಾರಿ ಕೆಂಚರಾಯ ಮಾತನಾಡಿ, ತಳ ಸಮುದಾಯದ ವೃದ್ಧರು, ನಿರ್ಗತಿಕರಿಂದ ದಾಖಲಾತಿಗಳನ್ನು ಪಡೆದು ಸಂಬಂಧಿಸಿದ ಕಚೇರಿಗಳಿಗೆ ತಲುಪಿಸಿ, ಸಂಪೂರ್ಣ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಆದೇಶ ಪ್ರತಿ ಬರುವವರೆಗೆ ಕಚೇರಿಗಳಿಗೆ ಓಡಾಡಿ ನಂತರ ಮನೆ ಬಾಗಿಲಿಗೆ ಸಂಧ್ಯಾ ಸುರಕ್ಷಾ ಯೋಜನೆ, ವೃದ್ಧಾಪ್ಯ ವೇತನ, ಅಂಗವಿಕಲ, ವಿಧವಾ ವೇತನ, ಮನಸ್ವಿನಿ ಸೇರಿದಂತೆ ವಿವಿಧ ಯೋಜನೆಗಳ ಪಿಂಚಣಿ ಆದೇಶ ಪ್ರತಿಯನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಗುತ್ತಿದೆ ಎಂದರು.